ದ.ಕ. ಜಿಲ್ಲೆ : ಹೊಸದಾಗಿ 246 ಮಂದಿಗೆ ಕೊರೋನ ಸೋಂಕು, ಕೋವಿಡ್ಗೆ ಆರು ಬಲಿ
ಮಂಗಳೂರು, ಆ.13: ದಕ್ಷಿಣ ಕನ್ನಡದಲ್ಲಿ ಗುರುವಾರ 641 ಮಂದಿ ಕೊರೋನ ಸೋಂಕಿತರು ಗುಣಮುಖರಾಗಿದ್ದಾರೆ. ಇದರಲ್ಲಿ ಕೋವಿಡ್ ಕೇರ್ ಸೆಂಟರ್ನ 100, ಗೃಹ ಕೇರ್ ಸೆಂಟರ್ನ 429 ಮತ್ತು ಆಸ್ಪತ್ರೆಗಳಿಂದ ಬಿಡುಗಡೆಯಾದ 112 ಮಂದಿ ಸೇರಿದ್ದಾರೆ. ಈ ತನಕ ಒಟ್ಟು 5,873 ಮಂದಿ ಗುಣಮುಖರಾಗಿದ್ದಾರೆ.
246 ಮಂದಿಗೆ ಕೋವೀಡ್ ಸೋಂಕು ತಗಲಿರುವುದು ದೃಢಪಟ್ಟಿದೆ. ಮಂಗಳೂರಿನ 150, ಬಂಟ್ವಾಳದ 47, ಪುತ್ತೂರಿನ 16, ಸುಳ್ಯದ 7, ಬೆಳ್ತಂಗಡಿಯ 15 ಮತ್ತು ಹೊರ ಜಿಲ್ಲೆಗಳ 11 ಮಂದಿ ಸೋಂಕು ದೃಢ ಪಟ್ಟವರ ಸಾಲಿಗೆ ಸೇರಿದ್ದಾರೆ.
ಪ್ರಾಥಮಿಕ ಸಂಪರ್ಕದಿಂದ 36 ಮಂದಿಯಲ್ಲಿ, ಶೀತಜ್ವರದಿಂದ ಬಳಲುತ್ತಿದ್ದ 103 ಮಂದಿಯಲ್ಲಿ ಮತ್ತು ತೀವ್ರ ಉಸಿರಾಟದ ತೊಂದರೆಗೆ ಒಳ ಪಟ್ಟ 10 ಮಂದಿಯಲ್ಲಿ ಸೋಂಕು ಖಚಿತಗೊಂಡಿದೆ. 97 ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟನೆಯಲ್ಲಿ ತಿಳಿಸಿದೆ.
ಗುರುವಾರ 6 ಸಾವು ಸಂಭವಿಸಿದೆ. ಇದರಲ್ಲಿ ಮಂಗಳೂರಿನ ಮೂವರು, ಬಂಟ್ವಾಳದ ಒಬ್ಬರು ಮತ್ತು ಇತರ ಜಿಲ್ಲೆಗಳ ಇಬ್ಬರು ಸೇರಿದ್ದಾರೆ. ಈ ತನಕ ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ 250 ಮಂದಿ ಮೃತ ಪಟ್ಟಿದ್ದಾರೆ.