ಬೆಂಗಳೂರು: ಬಿಬಿಎಂಪಿಯಿಂದ ನಿರ್ಮಿತ ಸಾವರ್ಕರ್ ಕಂಚಿನ ಪ್ರತಿಮೆ ಅನಾವರಣ
![ಬೆಂಗಳೂರು: ಬಿಬಿಎಂಪಿಯಿಂದ ನಿರ್ಮಿತ ಸಾವರ್ಕರ್ ಕಂಚಿನ ಪ್ರತಿಮೆ ಅನಾವರಣ ಬೆಂಗಳೂರು: ಬಿಬಿಎಂಪಿಯಿಂದ ನಿರ್ಮಿತ ಸಾವರ್ಕರ್ ಕಂಚಿನ ಪ್ರತಿಮೆ ಅನಾವರಣ](https://www.varthabharati.in/sites/default/files/images/articles/2020/08/15/255076-1597480681.jpeg)
ಬೆಂಗಳೂರು, ಆ.15: ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿರುವ ಯಡಿಯೂರು ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿತ ಸ್ವಾತಂತ್ರ್ಯ ಹೋರಾಟಗಾರ ‘ವಿನಾಯಕ ದಾಮೋದರ್ ಸಾವರ್ಕರ್’ರವರ 5 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಶನಿವಾರ ಅನಾವರಣ ಮಾಡಲಾಯಿತು.
ಬಿಬಿಎಂಪಿ ಮಹಾಪೌರ ಎಂ.ಗೌತಮ್ ಕುಮಾರ್ ಪ್ರತಿಮೆಯನ್ನು ಅನಾವರಣ ಮಾಡಿದರು. ಉಪ ಮಹಾಪೌರ ರಾಮಮೋಹನ್ ರಾಜು ಸಿ.ಆರ್., ಪಾಲಿಕೆಯ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ದಕ್ಷಿಣ ವಲಯದ ಜಂಟಿ ಆಯುಕ್ತ ವಿ.ಎನ್.ವೀರಭದ್ರಸ್ವಾಮಿ ಹಾಗೂ ಸ್ಥಳೀಯ ಪಾಲಿಕೆ ಸದಸ್ಯ ಪೂರ್ಣಿಮಾ ರಮೇಶ್ ನೆರವೇರಿಸಿದರು.
![](https://www.varthabharati.in/sites/default/files/images/galllery/2020/08/15/svrkr (2).jpeg)
Next Story