ಪಣಂಬೂರು ಬೀಚ್ನಲ್ಲಿ ಗಮನ ಸೆಳೆದ ಮರಳು ಕಲಾಕೃತಿ
ಮಂಗಳೂರು, ಆ.15: ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಮಂಗಳೂರಿನ ಪಣಂಬೂರು ಬೀಚ್ನಲ್ಲಿ ಶನಿವಾರ ಮರಳು ಕಲಾಕೃತಿಯು ಸಾರ್ವಜನಿಕರ ಗಮನ ಸೆಳೆದಿದೆ.
ಮಂಗಳೂರಿನ ಯುವಕರ ತಂಡವೊಂದು ಈ ಕಲಾಕೃತಿಯನ್ನು ರಚನೆ ಮಾಡುವ ಮೂಲಕ ನೋಡುಗರ ಗಮನ ಸೆಳೆದಿದ್ದಾರೆ. ಈ ಕಾಲಕೃತಿಯು ಕಲಾವಿದರಾದ ಅಜಯ್, ಧಾರೇಶ್, ಧನಂಜಯ್, ಗಿರೀಶ್, ವಿಕ್ಕಿ, ಜಗದೀಶ, ಗಣೇಶ್ ಭಟ್, ರಂಜಿತ್, ದೀಕ್ಷಾ, ತನ್ವಿತಾ ಅವರ ಕೈಚಳಕದಿಂದ ಮೂಡಿಬಂದಿದೆ. ಸುಮಾರು ಏಳು ಅಡಿ ಎತ್ತರದ ಭಾರತ ನಕಾಶೆಯು ಮರಳಿನ ಶಿಲ್ಪದ ಮೂಲಕ ಮೂಡಿಬಂದಿದೆ.
Next Story