ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿಯಿಂದ ಸ್ವಾತಂತ್ಯೋತ್ಸವ
ವಿಟ್ಲ : ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ವಿಟ್ಲ ಡಿ.ವೈ.ಎಫ್.ಐ ಕಚೇರಿ ಮುಂದೆ ನಡೆಯಿತು.
ಹಿರಿಯ ನಾಗರೀಕರು ಹಾಗೂ ಹನುಮಾನ್ ಪ್ರಿಂಟರ್ಸ್ ವಿಟ್ಲ ಇದರ ಮಾಲಕರಾದ ವೆಂಕಟೇಶ್ ಭಟ್ ದ್ವಜಾರೋಹಣ ನೆರವೇರಿಸಿದರು, ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಯುವಜನರು ದೇಶಪ್ರೇಮ ವನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮ ದಲ್ಲಿ ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, ಮಾನವ ಬಂಧುತ್ವ ವೇದಿಕೆ ತಾಲೂಕು ಅಧ್ಯಕ್ಷರಾದ ರಾಜಾ ಚೆಂಡ್ತಿಮಾರ್ ,ಮಹಮ್ಮದ್ ಇಕ್ಬಾಲ್ ಹಳೆಮನೆ, ಸಾಮಾಜಿಕ ನಾಯಕರಾದ ರಾಜೇಶ್ ಭಟ್, ನ್ಯಾಯವಾದಿ ತುಳಸೀದಾಸ್ ವಿಟ್ಲ , ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಕಾರ್ಮಿಕ ನಾಯಕರಾದ ದೇಜಪ್ಪ ಪೂಜಾರಿ, ರಾಜೀವ ಕೆ ಕೋಟ್ಯಾನ್, ಡಿ.ವೈ.ಎಫ್.ಐ ವಿಟ್ಲ ವಲಯ ಅಧ್ಯಕ್ಷರಾದ ನುಜಮ್ ಅಳಿಕೆ ,ಕಾರ್ಯದರ್ಶಿ ಜಮೀಲ್.ಎಂ, ಮುಖಂಡರಾದ ಆರೀಫ್.ಬಿ.ಕೆ, ರಾಘವೇಂದ್ರ, ಸಲೀಂ ಮಲಿಕ್ ,ಮಹಮ್ಮದಾಲಿ ಮದಕ, ಇರ್ಫಾನ್ ಒಕ್ಕೆತ್ತೂರು, ಮುಂತಾದವರು ಭಾಗವಹಿಸಿದ್ದರು.
ಡಿ.ವೈ.ಎಫ್.ಐ ವಿಟ್ಲ ವಲಯ ಉಪಾಧ್ಯಕ್ಷ ರಾದ ಸಲ್ಮಾನ್ ಪಿ.ಬಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.