ತುಂಬೆ ಅಹ್ಮದ್ ಹಾಜಿ ನಿಧನ: ಐ ಎಸ್ ಎಫ್ ಸಂತಾಪ
ಮಂಗಳೂರು : ಬಿ ಎ ಸಮೂಹ ಸಂಸ್ಥೆಗಳ ಅಧ್ಯಕ್ಷರು, ಸಾಮಾಜಿಕ ಹಾಗು ಶೈಕ್ಷಣಿಕ ರಂಗದ ಅದ್ವಿತೀಯ ನಾಯಕರಾದ ಬಿ ಎ ಅಹ್ಮದ್ ಹಾಜಿ ಮುಹಿಯುದ್ದೀನ್ ರವರ ನಿಧನದಿಂದ ಸಮಾಜ ಮಾನವೀಯ ಗುಣವುಳ್ಳ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದೆ ಎಂದು ಇಂಡಿಯನ್ ಸೋಶಿಯಲ್ ಫಾರಮ್ ತೀವ್ರ ಸಂತಾಪ ಸೂಚಿಸಿದೆ.
ಶೈಕ್ಷಣಿಕ ರಂಗದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿ ಮುಸ್ಲಿಂ ಸಮುದಾಯ ವಿದ್ಯಾಭ್ಯಾಸದಿಂದ ದೂರ ಉಳಿದ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಗಳನ್ನು ಹುಟ್ಟುಹಾಕಿ ಮುಸ್ಲಿಂ ಸಮುದಾಯವನ್ನು ಸುಶಿಕ್ಷಿತರನ್ನಾಗಿಸುವ ಪ್ರಯತ್ನವನ್ನು ಮಾಡಿದರು. ಶೈಕ್ಷಣಿಕ ಮಾತ್ರವಲ್ಲದೆ ಧಾರ್ಮಿಕ ರಂಗಕ್ಕೂ ಅಹ್ಮದ್ ಹಾಜಿ ಕೊಡುಗೆ ಅಪಾರ, ಮಸೀದಿಯ ಅಧ್ಯಕ್ಷರಾಗಿ, ಹಲವಾರು ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ವ್ಯಕ್ತಿಯಾಗಿದ್ದರು ಅವರ ಅಗಲುವಿಕೆಯಿಂದ ಸಮಾಜ ಒಬ್ಬ ಉನ್ನತ ನಾಯಕನನ್ನು ಕಳೆದುಕೊಂಡಿದೆ ಎಂದು ಇಂಡಿಯನ್ ಸೋಶಿಯಲ್ ಫಾರಮ್ ತೀವ್ರ ಸಂತಾಪ ಸೂಚಿಸಿದೆ. ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ಇವರ ಕುಟುಂಬಕ್ಕೆ ಸೃಷ್ಟಿಕರ್ತನು ದಯಪಾಲಿಸಲಿ ಎಂದು ಐ ಎಸ್ ಎಫ್ ಸೌದಿ ಅರೇಬಿಯಾ ಪ್ರಕಟಣೆಯಲ್ಲಿ ತಿಳಿಸಿದೆ.





