ಭಾರೀ ಮಳೆ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.60 ಸಾವಿರ ಕ್ಯೂಸೆಕ್
ಶಹಾಪುರ, ಆ.17: ಮಹಾರಾಷ್ಟ್ರದ ಮಹಾಮಳೆಗೆ ನಾರಾಯಣಪುರ ಜಲಾಶಯ ತುಂಬಿರುವುದರಿಂದ ಕೃಷ್ಣಾ ನದಿಗೆ 2.60 ಸಾವಿರ ಕ್ಯೂಸೆಕ್ ನೀರು ಹರಿಯಬಿಡಲಾಗುತ್ತಿದೆ.
ಆದ್ದರಿಂದ ಶಹಾಪುರ - ದೇವದುರ್ಗ ಸಂಪರ್ಕ ರಸ್ತೆ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ನದಿ ತಟದ ಗ್ರಾಮಗಳಿಗೆ ಹಿನ್ನೀರು ನುಗ್ಗಿರುವುದರಿಂದ ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.
Next Story