ಜೆಡಿಎಸ್ ವರಿಷ್ಠ ದೇವೇಗೌಡೊಂದಿಗೆ ವಿಡಿಯೋ ಸಂವಾದ
ಉಡುಪಿ, ಆ.16: ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರಿಂದ ಭೂಸುಧಾರಣಾ ಕಾಯ್ದೆ ತಿದ್ದು ಪಡಿ, ಎಪಿಎಂಸಿ ಕಾಯಿದೆ ಮತ್ತು ಕಾರ್ಮಿಕರ ಕಾಯ್ದೆ ತಿದ್ದುಪಡಿ ಮಾಡಿ ರಾಜ್ಯ ಸರಕಾರ ಹೊರಡಿಸಿರುವ ಸುಗ್ರಿವಾಜ್ಞೆ ಮತ್ತು ಕೋವಿಡ್ ನಿಯಂತ್ರಣದಲ್ಲಿ ಸರಕಾರದ ವೈಫಲ್ಯ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಹೋರಾಟ ಮತ್ತು ಮಾಹಿತಿ ಪಡೆಯುವ ವಿಡಿಯೋ ಸಂವಾದ ಕಾರ್ುಕ್ರಮ ಸೋಮವಾರ ನಡೆಯಿತು.
ಉಡುಪಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, ತಾಲೂಕು ಅಧ್ಯಕ್ಷರುಗಳು ಹಾಗೂ ಮಾಜಿ ಅಭ್ಯರ್ಥಿಗಳು ಸಂವಾದ ಕಾರ್ಯ ಕ್ರಮದಲ್ಲಿ ಭಾಗಿಯಾಗಿ, ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ದೇವೆಗೌಡರಿಗೆ ಹಾಗೂ ಮುಖಂಡರಿಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಮುಖಂಡರಾದ ಜಯರಾಮ್ ಆಚಾರ್ಯ, ಎಸ್.ಪಿ.ಬರ್ಬೊಝ, ಬಿರ್ತಿ ಗಂಗಾದರ ಭಂಡಾರಿ, ಅಬ್ದುಲ್ ಹಮೀದ್, ರಜಾಕ್ ಉಚ್ಚಿಲ, ಸನವಾರ್ ಶೇಖರ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
Next Story