ಕುದ್ರೋಳಿ: ಸಾಧಕರಿಗೆ ಸನ್ಮಾನ
ಮಂಗಳೂರು, ಆ.17: ಕುದ್ರೋಳಿಯ ಮುಸ್ಲಿಮ್ ಐಕ್ಯತಾ ವೇದಿಕೆಯ ವತಿಯಿಂದ ನಡೆದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ವೇದಿಕೆಯ ಅಧ್ಯಕ್ಷ ಕೆ.ಅಶ್ರಫ್ ನೆರವೇರಿಸಿದರು.
ಈ ಸಂದರ್ಭ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕ ಪಡೆದ ಪರಿಸರದ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಬಂದರ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು ಹಾಗೂ ಹಿದಾಯ ಫೌಂಡೇಶನ್ನ ಎಚ್.ಕೆ. ಕಾಸಿಮ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಉಪಾಧ್ಯಕ್ಷ ಬಿ.ಅಬೂಬಕ್ಕರ್, ವೇದಿಕೆಯ ಪ್ರಧಾನ ಕಾರ್ಯದರ್ಶಿ ಅಝೀಝ್ ಕುದ್ರೋಳಿ, ಮನಪಾ ಸದಸ್ಯ ಶಂಸುದ್ದಿನ್, ವೇದಿಕೆಯ ಮುಖಂಡರಾದ ಯಾಸೀನ್ ಕುದ್ರೋಳಿ, ಮಕ್ಬೂಲ್ ಅಹ್ಮದ್, ವಹಾಬ್ ಕುದ್ರೋಳಿ, ಫಝಲ್ ಎಂ, ಇಸ್ಮಾಯಿಲ್, ಮುಸ್ತಾಕ್, ಎಸ್.ಎ. ಖಲೀಲ್, ನಾಸಿರುದ್ದೀನ್, ಕೆ.ಕೆ.ಲತೀಫ್, ಮಕ್ಬೂಲ್ ಕುದ್ರೋಳಿ, ಮುಝಯ್ರೋ, ಇಕ್ಬಾಲ್, ಲತೀಫ್, ಎನ್ಕೆ ಅಬೂಬಕ್ಕರ್, ಹಾರಿಸ್ ಪಾಲ್ಗೊಂಡಿದ್ದರು.
Next Story