ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ನಿಧನ
ಮಂಗಳೂರು, ಆ.18: ದೇರಳಕಟ್ಟೆ ಸಮೀಪದ ಕಿನ್ಯದ ಬೆಳರಿಂಗೆ ನಿವಾಸಿ ಮಣಿಪಾಲ್ ಉಸ್ತಾದ್ ಎಂದೇ ಖ್ಯಾತರಾಗಿದ್ದ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ (72) ಮಂಗಳವಾರ ಅಪರಾಹ್ನ ಸ್ವಗೃಹದಲ್ಲಿ ನಿಧನರಾದರು.
ಬಜ್ಪೆ, ಕಾಸರಗೋಡಿನ ಚೆಮ್ನಾಡ್, ಮಣಿಪಾಲ ಜುಮಾ ಮಸೀದಿಗಳಲ್ಲಿ ಖತೀಬ್ ಆಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ನಾಲ್ಕು ಮಂದಿ ಪುತ್ರರು ಹಾಗೂ ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಮಂಗಳವಾರ ರಾತ್ರಿ 8 ಗಂಟೆಗೆ ಕಿನ್ಯ ಬೆಲ್ತ ಜುಮಾ ಮಸ್ಜಿದ್ ಬಳಿ ನಡೆಯಲಿದೆ.
Next Story