ಬೆಂಗಳೂರು ಹಿಂಸಾಚಾರ ಪ್ರಕರಣ: ಕನ್ನಡ ಮಾಧ್ಯಮಗಳ ವಿರುದ್ಧ ನೆಟ್ಟಿಗರ ಆಕ್ರೋಶ
ಟ್ವಿಟರ್ ನಲ್ಲಿ #KannadaMediaStopConspiracy ಟ್ರೆಂಡಿಂಗ್
![ಬೆಂಗಳೂರು ಹಿಂಸಾಚಾರ ಪ್ರಕರಣ: ಕನ್ನಡ ಮಾಧ್ಯಮಗಳ ವಿರುದ್ಧ ನೆಟ್ಟಿಗರ ಆಕ್ರೋಶ ಬೆಂಗಳೂರು ಹಿಂಸಾಚಾರ ಪ್ರಕರಣ: ಕನ್ನಡ ಮಾಧ್ಯಮಗಳ ವಿರುದ್ಧ ನೆಟ್ಟಿಗರ ಆಕ್ರೋಶ](/images/placeholder.jpg)
ಬೆಂಗಳೂರು, ಆ.18: ಇತ್ತೀಚಿಗೆ ಕಾವಲ್ ಭೈರಸಂಧ್ರ, ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಮಾಧ್ಯಮಗಳ ವಿರುದ್ಧ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಉತ್ತರ ಕರ್ನಾಟಕ ಪ್ರವಾಹದ ಬಗ್ಗೆ ಮಾತನಾಡದೇ ಇನ್ನೂ ಕೂಡಾ ಹಿಂಸಾಚಾರ ಪ್ರಕರಣದ ಬಗ್ಗೆಯೇ ಚರ್ಚಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಶಾಸಕ ಅಖಂಡಶ್ರೀನಿವಾಸ ಮೂರ್ತಿ ಅವರ ಸಂಬಂಧಿ ಯುವಕನೋರ್ವ ಪ್ರವಾದಿ ಅವರನ್ನು ನಿಂದಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದ. ಆ ಬಳಿಕ ಯುವಕನ ಬಂಧನಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ಬಳಿಕ ಅದು ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರ ಗೋಲಿಬಾರ್ ನಲ್ಲಿ ನಾಲ್ವರು ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 300ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ
ಆದರೆ ಘಟನೆ ನಡೆದು ಕೆಲ ದಿನಗಳಾದರೂ ಕೂಡಾ ಹಿಂಸಾಚಾರ ಪ್ರಕರಣದ ಬಗ್ಗೆಯೇ ಚರ್ಚಿಸುತ್ತಿದ್ದಾರೆ ಎಂದು ಕನ್ನಡ ಮಾಧ್ಯಮಗಳ ವಿರುದ್ಧ ಟ್ವಿಟರಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ನೂರಾರು ಗ್ರಾಮಗಳು ಜಲಾವೃತಗೊಂಡಿದೆ. ಈ ಬಗ್ಗೆ ಸುದ್ದಿ ಮಾಡದೇ ಟಿಆರ್ ಪಿ ಗಾಗಿ ಕನ್ನಡ ಸುದ್ದಿ ಮಾಧ್ಯಮಗಳು ಹಿಂಸಾಚಾರ ಪ್ರಕರಣವನ್ನೇ ತೋರಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಸದ್ಯ ಟ್ವಿಟರ್ ನಲ್ಲಿ #KannadaMediaStopConspiracy ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಸುಮಾರು 15 ಸಾವಿರಷ್ಟು ಮಂದಿ ಟ್ವೀಟ್ ಮಾಡಿದ್ದು, ಕರ್ನಾಟಕ ಟ್ರೆಂಡಿಂಗ್ ನಲ್ಲಿ ಮೂರನೇ ಸ್ಥಾನದಲ್ಲಿದೆ.
''ಬೆಂಗಳೂರು ಘಟನೆ; ದಿನಕ್ಕೊಂದರಂತೆ ಕಿಂಗ್ ಪಿನ್ ಗಳನ್ನು ಸೃಷ್ಟಿಸುತ್ತಿರುವ ಮಾಧ್ಯಮಗಳೇ ನಿಜವಾದ ಕಿಂಗ್ ಪಿನ್ ಗಳು", "ಟಿಆರ್ಪಿಯ ಹಿಂದೆ ರಾಜ್ಯವನ್ನು ಹೊತ್ತಿಉರಿಸುವ ಕನಸಿನಲ್ಲಿರುವ ಮಾಧ್ಯಮಗಳಿಗೆ ಪ್ರವಾಹ ಕಾಣುತ್ತಿಲ್ಲ. ಕಾಣಿಸುವುದೂ ಇಲ್ಲ. ಅವರ ಕೆಲಸ ಟಿಆರ್ಪಿ ಹೆಚ್ಚಿಸಿ ಬೆಂಕಿ ಹಚ್ಚಿ ಚಳಿ ಕಾಯಿಸುವುದು" ಎಂದು ಟ್ವಿಟರಿಗರೊಬ್ಬರು ದೂರಿದ್ದಾರೆ.
"ಭಾರೀ ಹಗರಣ ನಡೆಸಿ ಬಿಜೆಪಿ, ಸಂಘಪರಿವಾರ ಬೆತ್ತಲಾದಾಗ ಅವರಿಗೆ ಬಟ್ಟೆ ತೊಡಿಸುವ ಕಾರ್ಯವನ್ನು ಲಜ್ಜೆಗೆಟ್ಟ ಮಾಧ್ಯಮಗಳು ನಡೆಸುತ್ತಿವೆ. ಲಜ್ಜೆ ಬಿಟ್ಟು ಹೆಜ್ಜೆ ಹಾಕಿದವರಿಗೆ ಕೋವಿಡ್ ಸಂತ್ರಸ್ತರ ನೋವು, ಡಿಜೆಹಳ್ಳಿ ಅಮಾಯಕರ ಗೋಳು ಕೇಳಿಸುವುದೇ? ಪೀತ ಮಾಧ್ಯಮಗಳು ಕನ್ನಡ ನಾಡಿಗೆ ಶಾಪವಾಗಿ ಪರಿಣಮಿಸಿದೆ" ಎಂದು ಮತ್ತೊಬ್ಬರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
"ಬೆಂಗಳೂರಿನ ಮಾಧ್ಯಮದ ಬೆಂಕಿಗೆ ಉತ್ತರ ಕರ್ನಾಟಕದ ನೆರೆ ನೀರು ನುಗ್ಗಿಬಿಡಲಿ, ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಕನ್ನಡ ಮಾಧ್ಯಮದ ವ್ಯರ್ಥ ಶಕ್ತಿ ಕುಗ್ಗಿಬಿಡಲಿ" ಒಬ್ಬರು ಟ್ವೀಟ್ ಮಾಡಿದ್ದು, "ಅಂದು ಪರೇಶ್ ಮೇಸ್ತಾ ಹೆಸರಿನಲ್ಲಿ ಸಂಘಪರಿವಾರದೊಂದಿಗೆ ಸೇರಿ ಉತ್ತರ ಕರ್ನಾಟಕಕ್ಕೆ ಬೆಂಕಿ ಇಟ್ಟ ಮಾಧ್ಯಮವು ಇಂದು ನವೀನನೊಂದಿಗೆ ಸೇರಿ ಬೆಂಗಳೂರನ್ನು ಹೊತ್ತಿಸುತ್ತಿವೆ" ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.
We should fight this new NEWS Fascism, Hitler did the same thing. There are floods going on, #bbmp under @BBMP_MAYOR is more corrupt than ever. But our media won't cover it, they just wanna brew hate #KannadaMediaStopConspiracy https://t.co/SYaoKaIWI4
— Milton Peter (@MiltonPeter12) August 18, 2020
ಕನ್ನಡ ಮಾಧ್ಯಮದವರೇ,
— Ibrahim (@Ibrahim14847870) August 18, 2020
ಬೆಂಗಳೂರು ಗಲಭೆ ನಿಂತರೂ ಮತ್ತೆ ಮತ್ತೆ ತೋರಿಸಿ ಬಿಸಿಯೇರಿದ ನಿಮ್ಮ ಕ್ಯಾಮರಾವನ್ನೊಮ್ಮೆ ಉತ್ತರ ಕರ್ನಾಟಕದ ಕಡೆ ಕೊಂಡು ಹೋಗಿ, ಅಲ್ಲಿನ ನೆರೆಯ ನೀರಿಗೆ ನಿಮ್ಮ ಕ್ಯಾಮರ ಅಲ್ಪ ತಣ್ಣಗಾಗಲೂಬಹುದು.#KannadaMediaStopConspiracy
Pic 1:Paresh Mesta Issue
— Undefeated_Faith (@Shaad_Bajpe) August 18, 2020
When the bajrangdal protesters vandalised and burnt police station,Masjid,Police vehicle & even attacked police
Kannada media turned a blind eye.
Pic2: DJ Halli issue. Now it's almost a week.
Still they are enjoying TRP game.#KannadaMediaStopConspiracy pic.twitter.com/DWpG7xj8dl