ಆ. 29: ವಚನ ದಿನ ಪ್ರಯುಕ್ತ ಸ್ಪರ್ಧೆ ಆಯೋಜನೆ
ಮಂಗಳೂರು, ಆ.18: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ನ ದ.ಕ. ಜಿಲ್ಲಾ ಘಟಕದಿಂದ ಆ.29ರಂದು ನಡೆಯಲಿರುವ ವಚನ ದಿನದ ಪ್ರಯುಕ್ತ ಜಿಲ್ಲೆಯ ಎಲ್ಲ ತಾಲೂಕುಗಳ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.
ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದೆ. 8, 9 ಮತ್ತು 10ನೇ ತರಗತಿಗಳನ್ನು ಒಳಗೊಂಡ ಪ್ರೌಢ ಶಾಲಾ ವಿಭಾಗಕ್ಕೆ ವಿಷಯ: ‘ನನ್ನ ನೆಚ್ಚಿನ ಶರಣ/ಶರಣೆ’- ಒಬ್ಬರ ಕುರಿತು ಮೂರು ಪುಟಗಳಿಗೆ ಮೀರದಂತೆ ಬರೆಯಬೇಕು.
ಎಸೆಸೆಲ್ಸಿ ಮೇಲ್ಪಟ್ಟು ಪದವಿ, ಸ್ನಾತ್ತಕೋತ್ತರ ಹಾಗೂ ಸಾರ್ವಜನಿಕರಿಗೆ ಎರಡನೇ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ‘ವಚನಗಳಲ್ಲಿ ಜೀವನ ಮೌಲ್ಯಗಳು ಮತ್ತು ಅನುಷ್ಠಾನ’ ವಿಷಯದ ಕುರಿತಂತೆ ನಾಲ್ಕು ಪುಟಗಳಿಗೆ ಮೀರದಂತೆ ಬರೆದು ಕಳುಹಿಸಬೇಕು.
ವಿಜೇತರಿಗೆ ತಾಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಅಲ್ಲದೆ, ಅದೇ ಪ್ರಬಂಧಗಳನ್ನು ಆಧರಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು.
ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರಗಳನ್ನು ಆ.29ರಂದು ಮಂಗಳೂರು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ವಿತರಿಸಲಾಗುವುದು.
ಆಸಕ್ತರು ತಮ್ಮ ಪ್ರಬಂಧಗಳನ್ನು ಆ.26ರ ಮೊದಲು ತಲುಪುವಂತೆ ಈ ವಿಳಾಸಕ್ಕೆ ಕಳುಹಿಸಿಕೊಡಬಹುದು. ಪ್ರಾಚಾರ್ಯರು, ಶಕ್ತಿ ವಸತಿ ಶಾಲೆ, ಶಕ್ತಿ ನಗರ, ಮಂಗಳೂರು-575016 / ಅಥವಾ ಇಮೇಲ್: schooloffice@shakthi.edu.in ಅಥವಾ 9945284015 (ವಾಟ್ಸ್ಆ್ಯಪ್) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.