Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗಡಿಯಲ್ಲಿ ಸೇನೆಗಾಗಿ ಹೊಸ ಮಾರ್ಗ

ಗಡಿಯಲ್ಲಿ ಸೇನೆಗಾಗಿ ಹೊಸ ಮಾರ್ಗ

ಶೀಘ್ರವೇ ಮನಾಲಿಯಿಂದ ಲಡಾಕ್‌ನ ಲೇಹ್‌ಗೆ ಹೊಸ ರಸ್ತೆ ನಿರ್ಮಾಣ

ವಾರ್ತಾಭಾರತಿವಾರ್ತಾಭಾರತಿ19 Aug 2020 10:04 PM IST
share
ಗಡಿಯಲ್ಲಿ ಸೇನೆಗಾಗಿ ಹೊಸ ಮಾರ್ಗ

ಹೊಸದಿಲ್ಲಿ,ಜು.21: ಲಡಾಕ್‌ನಲ್ಲಿರುವ ಪಾಕಿಸ್ತಾನ ಹಾಗೂ ಚೀನಾದ ಗಡಿ ಮುಂಚೂಣಿಗೆ ಸೇನಾಪಡೆಗಳನ್ನು ತ್ವರಿತವಾಗಿ ರವಾನಿಸುವ ಪ್ರಯತ್ನವಾಗಿ ಮನಾಲಿಯಿಂದ ಲೇಹ್‌ಗೆ ನೂತನ ರಸ್ತೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರತ ಶ್ರಮಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ದೌಲತ್‌ಬೇಗ್ ಓಲ್ಡಿ ಸೇರಿದಂತೆ ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಉತ್ತರ ಸಬ್‌ಸೆಕ್ಟರ್ ಮತ್ತಿತರ ಪ್ರದೇಶಗಳಿಗೂ ಪರ್ಯಾಯ ಸಂಪರ್ಕ ಮಾರ್ಗಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಭಾರತವು ಕಾರ್ಯೋನ್ಮುಖವಾಗಿದೆ. ಜಗತ್ತಿನ ಅತಿ ಎತ್ತರದ ಮೋಟಾರುವಾಹನ ಸಂಚಾರ ಯೋಗ್ಯವಾದ ಖಾರ್ದುಂಗ್ ಲಾ ಪಾಸ್‌ನ ಕಾಮಗಾರಿ ಕಾರ್ಯ ಈಗಾಗಲೇ ಆರಂಭಗೊಂಡಿದೆ.

  ಮನಾಲಿಯಿಂದ ಲೇಹ್‌ಗೆ ನಿಮು-ಪಡಂ-ದಾರ್ಚಾ ಆ್ಯಕ್ಸಿಸ್ ಮೂಲಕ ಪರ್ಯಾಯ ಸಂಪರ್ಕ ಮಾರ್ಗವನ್ನು ನಿರ್ಮಿಸಲು ಏಜೆನ್ಸಿಗಳು ಕಾರ್ಯನಿರತವಾಗಿವೆ. ಇದರಿಂದಾಗಿ ಶ್ರೀನಗರದಿಂದ ಜೊಝಿಲಾ ಪಾಸ್‌ಗೆ ಮನಾಲಿಯಿಂದ ಸಾರ್ಚು ಮೂಲಕ ಲೇಹ್‌ಗೆ ತೆರಳಲು ಈಗ ಇರುವ ಮಾರ್ಗಗಳಿಗೆ ಹೋಲಿಸಿದರೆ, ನೂತನವಾಗಿ ನಿರ್ಮಾಣಗೊಳ್ಳಲಿರುವ ರಸ್ತೆಗಳಿಂದ ಬಹಳಷ್ಟು ಸಮಯ ಉಳಿತಾಯವಾಗಲಿದೆ.

ಈವರೆಗೆ ಭಾರತವು ರೆಜಿಲ್ಲಾದಿಂದ ದ್ರಾಸ್-ಕಾರ್ಗಿಲ್ ಅಕ್ಷರೇಖೆ ಮಾರ್ಗವಾಗಿ ಲೇಹ್‌ಗೆ ತೆರಳುವ ರಸ್ತೆಯನ್ನು ಸರಕುಗಳು ಹಾಗೂ ಸೈನಿಕರ ಸಾಗಣೆಗೆ ಬಳಸಿಕೊಳ್ಳುತ್ತಿತ್ತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಇದೇ ಮಾರ್ಗವನ್ನು ಪಾಕಿಸ್ತಾನಿ ಸೈನಿಕರು ಗುರಿಯಿರಿಸಿದ್ದರು. ಈ ರಸ್ತೆಯ ಸಮೀಪವೇ ಚಾಚಿಕೊಂಡಿರುವ ಎತ್ತರದ ಪರ್ವತಗಳ ಮರೆಯಿಂದ ಪಾಕ್ ಸೈನಿಕರು ಭಾರತೀಯ ಯೋಧರ ಮೇಲೆ ಆಗಾಗ್ಗೆ ಗುಂಡು ಹಾಗೂ ಶೆಲ್ ದಾಳಿ ನಡೆಸುತ್ತಿದ್ದಾರೆ.

  ನೂತನ ರಸ್ತೆಯ ಕಾಮಗಾರಿ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ. ನೂತನ ರಸ್ತೆಯು ಮನಾಲಿಯನ್ನು ನೀಮು ಸಮೀಪ ಲೇಹ್‌ನೊಂದಿಗೆ ಸಂಪರ್ಕಿಸಲಿದೆ.

 ಇದೇ ರೀತಿ, ಆಯಕಟ್ಟಿನ ದುರ್ಬುಕ್- ಶ್ಯೊಕ್-ದೌಲತ್ ಬೇಗ್ ಓಲ್ಡಿ (ಡಿಎಸ್‌ಡಿಬಿಓ)ರಸ್ತೆಗೆ ಪರ್ಯಾಯ ಮಾರ್ಗವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿಯೂ ಭಾರತವು ಕಾರ್ಯೋನ್ಮುಖವಾಗಿದೆ. ಬೇಸಿಗೆಯ ಸಮಯದಲ್ಲಿ ಸೇನಾಪಡೆಯ ವಾಹನಗಳು ಪೂರ್ವ ಲಡಾಕ್ ಪ್ರದೇಶಗಳನ್ನು ತಲುಪಲು ಈ ರಸ್ತೆಯನ್ನು ಬಳಸಿಕೊಳ್ಳುತ್ತಿವೆ.

ಡಿಎಸ್‌ಡಿಬಿಓ ರಸ್ತೆಗೆ ಪರ್ಯಾಯ ಮಾರ್ಗವನ್ನು ಕಂಡುಹಿಡಿಯುವ ಹೊಣೆಗಾರಿಕೆಯನ್ನು 14 ಕಾರ್ಪ್ಸ್‌ಗೆ ನೀಡಲಾಗಿದೆ.

ನಾಲ್ಕು ತಾಸು ಉಳಿತಾಯ

   ನೂತನ ರಸ್ತೆಯಿಂದಾಗಿ ಮನಾಲಿಯಿಂದ ಲೇಹ್‌ಗೆ ಪ್ರಯಾಣಿಸುವುದಕ್ಕೆ ಮೂರರಿಂದ ನಾಲ್ಕು ತಾಸುಗಳು ಉಳಿತಾಯವಾಗಲಿವೆ. ಅಷ್ಟೇ ಅಲ್ಲದೆ ಇತರ ಸ್ಥಳಗಳಿಂದ ಲಡಾಕ್ ಪ್ರದೇಶಕ್ಕೆ ಟ್ಯಾಂಕ್‌ಗಳು ಹಾಗೂ ಫಿರಂಗಿ ಗನ್‌ಗಳು ಪಾಕಿಸ್ತಾನ ಅಥವಾ ಇತರ ಎದುರಾಳಿಗಳಿಗೆ ಭಾರತೀಯ ಸೇನೆಯ ಚಲನವಲನದ ಮೇಲೆ ಕಣ್ಗಾವಲಿಡಲು ಸಾಧ್ಯವಾಗುವುದಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X