ಅದ್ಯಪಾಡಿ ಬದ್ರಿಯ ಮಸ್ಜಿದ್ ಪದಾಧಿಕಾರಿ ಆಯ್ಕೆ
ಮಂಗಳೂರು, ಆ.19: ಅದ್ಯಪಾಡಿ ಬದ್ರಿಯ ಮಸ್ಜಿದ್ ಹಾಗೂ ತಕ್ವಿಯತುಲ್ ಇಸ್ಲಾಂ ಮದ್ರಸದ 2020ರಿಂದ 2021ನೇ ಸಾಲಿನ ಮಹಾಸಭೆಯು ಸೋಮವಾರ ನಡೆಯಿತು. ಈ ಸಂದರ್ಭ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಅನ್ಸಾರ್, ಉಪಾಧ್ಯಕ್ಷರಾಗಿ ನಿಝಾಮುದ್ದೀನ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅನೀಸ್, ಜೊತೆ ಕಾರ್ಯದರ್ಶಿ ಯಾಗಿ ಎಸ್.ಎಂ. ಉಸ್ಮಾನ್ ಮುಸ್ಲಿಯಾರ್, ಕೋಶಾಧಿಕಾರಿಯಾಗಿ ಮುಹಮ್ಮದ್ ಎಸ್., ಲೆಕ್ಕ ಪರಿಶೋಧಕರಾಗಿ ಇಬ್ರಾಹೀಂ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಟಿ.ಉಸ್ಮಾನ್, ಅಬೂಬಕರ್ ಸಿದ್ದೀಕ್, ರಿಲ್ವಾನ್, ಸಲೀಂ, ನಝೀರ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಅದ್ಯಪಾಡಿ ಬದ್ರಿಯ ಮಸ್ಜಿದ್ ಹಾಗೂ ತಕ್ವಿಯತುಲ್ ಇಸ್ಲಾಂ ಮದ್ರಸದ ಪ್ರಕಟನೆ ತಿಳಿಸಿದೆ.
Next Story