ಅಂಬಲಪಾಡಿ ಬಾಲಗಣೇಶೋತ್ಸವ ಸಮಿತಿಯಿಂದ ಸರಳ ಗಣೇಶೋತ್ಸವ
ಉಡುಪಿ, ಆ.20:ನಗರದ ಅಂಬಲಪಾಡಿಯ ಶ್ರೀಬಾಲಗಣೇಶೋತ್ಸವ ಸಮಿತಿ ವತಿಯಿಂದ ಅಂಬಲಪಾಡಿಯಲ್ಲಿ ನಡೆಯುವ 44ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಈ ಬಾರಿ ಸರಳವಾಗಿ ಒಂದು ದಿನಕ್ಕೆ ಸೀಮಿತಗೊಂಡು ನಡೆಯಲಿದೆ.
ಅಂಬಲಪಾಡಿಯ ವಸಂತ ಮಂಟಪದ ಬಳಿ, ರಾಷ್ಟ್ರೀಯ ಹೆದ್ದಾರಿ ಸಮೀಪದ ಮೈದಾನದಲ್ಲಿ ನಡೆಯುವ ಈ ಬಾರಿಯ ಸಾರ್ವಜನಿಕ ಗಣೇಶೋತ್ಸವ ಕೊರೋನಾ ವೈರಸ್ ಭೀತಿಯಿಂದ ಸರಕಾರದ ಕಟ್ಟುಪಾಡಿನ ನಡುವೆ ಬಹಳ ಸೂಕ್ಷ ಹಾಗೂ ಸರಳವಾಗಿ ಒಂದೇ ದಿನ ನಡೆಯಲಿದೆ. ಸಾರ್ವಜನಿಕರು ಸಹರಿಸಬೇಕೆಂದು ಸಮಿತಿ ಅಧ್ಯಕ್ಷ ಪ್ರಶಾಂತ್ ಕೆ.ಎಸ್.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





