ಕೋವಿಡ್ ಗೆ ರಾಜ್ಯದಲ್ಲಿಂದು 93 ಮಂದಿ ಬಲಿ; ಸಾವಿನ ಸಂಖ್ಯೆ 4,615ಕ್ಕೆ ಏರಿಕೆ
ಮತ್ತೆ 7,330 ಮಂದಿಗೆ ಸೋಂಕು ದೃಢ

ಬೆಂಗಳೂರು, ಆ.22: ರಾಜ್ಯದಲ್ಲಿ ಶುಕ್ರವಾರದಿಂದ ಶನಿವಾರದವರೆಗೆ ಮತ್ತೆ 7,330 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 2,71,876 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 93 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 4615ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 28 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಧಾರವಾಡ 7, ಬಳ್ಳಾರಿ 7, ತುಮಕೂರು 6, ಕೊಪ್ಪಳ 6, ದಾವಣಗೆರೆ 5, ಬೀದರ್, ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ತಲಾ 4 ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 2979, ಧಾರವಾಡ 253, ಬಳ್ಳಾರಿ 533, ವಿಜಯಪುರ 151, ದಕ್ಷಿಣ ಕನ್ನಡ 228, ಕಲಬುರಗಿ 165, ಉಡುಪಿ 348, ಯಾದಗಿರಿ 123, ಉತ್ತರ ಕನ್ನಡ 64, ಬೆಳಗಾವಿ 312, ಗದಗ 116, ಬೀದರ್ 82, ದಾವಣಗೆರೆ 277, ಬಾಗಲಕೋಟೆ 138, ಚಿಕ್ಕಬಳ್ಳಾಪುರ 79, ಮಂಡ್ಯ 146, ಶಿವಮೊಗ್ಗ 221, ರಾಯಚೂರು 52, ಹಾಸನ 209, ತುಮಕೂರು 103, ಕೊಡಗು 24, ಕೋಲಾರ 69, ಕೊಪ್ಪಳ 170, ಚಿಕ್ಕಮಗಳೂರು 71, ಚಿತ್ರದುರ್ಗ 89, ಬೆಂಗಳೂರು ಗ್ರಾಮಾಂತರ 66, ಚಾಮರಾಜನಗರ 67, ಹಾವೇರಿ 141, ರಾಮನಗರದಲ್ಲಿ 54 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 2,71,876 ಕೊರೋನ ಸೋಂಕಿತರ ಪೈಕಿ 1,84,568 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 7626 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 4615 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 82677 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.







