Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ24 Aug 2020 12:10 AM IST
share
ಓ ಮೆಣಸೇ...

ಒಂದಲ್ಲ ಒಂದು ದಿನ ಭಾರತ ವಿಶ್ವದ ಮೂರನೇ ಅತ್ಯಂತ ದೊಡ್ಡ ಅರ್ಥ ವ್ಯವಸ್ಥೆಯಾಗಲಿದೆ - ಎಸ್.ಜೈಶಂಕರ್, ಕೇಂದ್ರ ಸಚಿವ
ಅದಾಗದಂತೆ ತಡೆಯಲು ಪ್ರಧಾನಿಯವರು ಗರಿಷ್ಠ ಪ್ರಯತ್ನ ನಡೆಸುತ್ತಿದ್ದಾರೆ.


ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳನ್ನು ಬಿಜೆಪಿ, ಆರೆಸ್ಸೆಸ್ ನಿಯಮಂತ್ರಿಸುತ್ತಿವೆ - ರಾಹುಲ್ ‌ಗಾಂಧಿ, ಕಾಂಗ್ರೆಸ್ ಮುಖಂಡ 

ಜೊತೆಗೆ ಕಾಂಗ್ರೆಸನ್ನು ಕೂಡ ನಿಯಂತ್ರಿಸುತ್ತಿದೆ ಎಂಬ ಆರೋಪಗಳಿವೆ.


ಡಿ.ಜೆ.ಹಳ್ಳಿ ಗಲಭೆಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಹಾಗಾದರೆ ಸಂಬಂಧ ಇರುವ ಗಲಭೆಗಳ ಪಟ್ಟಿಯನ್ನು ಬಹಿರಂಗಪಡಿಸಿ. 


ರಾಜ್ಯದಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರ ದಾಸ್ತಾನಿಗೆ ಸಮಸ್ಯೆಯಿಲ್ಲ - ಬಿ.ಸಿ.ಪಾಟೀಲ್, ಸಚಿವ
ಬಿತ್ತುವುದಕ್ಕೆ ರೈತರಿಗೆ ಭೂಮಿಯ ಸಮಸ್ಯೆಗಳಿವೆಯಂತೆ.


ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟಿಂಗ್ ಹಾಕುವವರ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ - ಬಸವರಾಜ ಬೊಮ್ಮಾಯಿ, ಸಚಿವ

ಅದಕ್ಕಾಗಿಯೇ ಬಿಜೆಪಿಯಿಂದ ಎರಡು ರೂಪಾಯಿ ಸಿಗುತ್ತದೆ ಎಂಬ ವದಂತಿಗಳಿವೆ.


ನಾವು ಪಾಪನೇ ಮಾಡಿಲ್ಲ, ಇನ್ನು ಕೂಸು ಎಲ್ಲಿ ಹುಟ್ಟುತ್ತೆ - ಅರವಿಂದ ಲಿಂಬಾವಳಿ, ಮಾಜಿ ಸಚಿವ

ಗಂಡು-ಹೆಣ್ಣು ಜೊತೆ ಸೇರಿ ಪಾಪ ಮಾಡಿದರೆ ಮಾತ್ರ ಕೂಸು ಹುಟ್ಟುವುದು.


ಭಾರತದ ಪ್ರಜಾಪ್ರಭುತ್ವಕ್ಕೆ ಈಗ ಪರೀಕ್ಷೆಯ ಕಾಲ -ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ

ಸರಿಯಾಗಿ ಸಂವಿಧಾನ ಪುಸ್ತಕ ಓದದೇ ಕಾಂಗ್ರೆಸ್ ಪರೀಕ್ಷೆಗೆ ಕೂತಿದೆ.


ದೇಶದ ಸಾರ್ವಭೌಮತೆ ವಿಷಯದಲ್ಲಿ ರಾಜಿ ಇಲ್ಲ - ನರೇಂದ್ರ ಮೋದಿ, ಪ್ರಧಾನಿ

ದೇಶದ ಸಾರ್ವಭೌಮತೆ ನಿಮ್ಮ ವಿಷಯದಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲವಂತೆ.


ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಬಂಡವಾಳಗಾರರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ಸಿಕ್ಕಂತಾಗಿದೆ - ದೇವೇಗೌಡ, ಮಾಜಿ ಪ್ರಧಾನಿ

 ಬಂಡವಾಳಗಾರರಿಗೆ ಕೃಷಿ ಮಾಡಲು ಮನಸ್ಸು ಬರಲಿ ಎಂದು ತಿದ್ದುಪಡಿ ಮಾಡಲಾಗಿದೆಯಂತೆ.


ಕೈತಪ್ಪಿ ಹೋದ ಅವಕಾಶ ಎಂದೆಂದಿಗೂ ಮರಳಿಬಾರದು -ಡಾ.ಕೆ.ಸುಧಾಕರ್, ಸಚಿವ

ಕೊರೋನ ನೀಡಿರುವ ಅವಕಾಶದ ಬಗ್ಗೆ ಹೇಳುತ್ತಿರಬೇಕು.


ನಮ್ಮದೇನಿದ್ದರೂ‘ಏಕ್ ಮಾರ್ ದೋ ತುಕ್ಡಾ’ ಎಂಬಂತೆ - ಸಿ.ಟಿ.ರವಿ, ಸಚಿವ
ಹೌದು, ನಿಮ್ಮದೇನಿದ್ದರೂ ತುಕ್ಡಾ ಗ್ಯಾಂಗ್.


ಕಾಂಗ್ರೆಸ್ ಕೂಡಾ ಹಿಂದೂ ಸೆಲ್ ಆರಂಭಿಸಬೇಕಿದೆ - ಆರ್.ಧರ್ಮಸೇನ, ವಿ.ಪ.ಸದಸ್ಯ

ಆರೆಸ್ಸೆಸ್ ಶಾಖೆಗಳನ್ನೂ ತೆರೆಯುವ ಅಗತ್ಯವಿದೆ.


ಮುಖ್ಯಮಂತ್ರಿ ಯಡಿಯೂರಪ್ಪ ಕೋವಿಡ್ ನಿರ್ವಹಣೆಯಲ್ಲಿ ದೇಶವೇ ಮೆಚ್ಚುವ ಕೆಲಸ ಮಾಡಿದ್ದಾರೆ- ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರಾಧ್ಯಕ್ಷ
 ರಾಜ್ಯವೂ ಮೆಚ್ಚಬೇಕಲ್ಲ?


ಸ್ವಾವಲಂಬಿ ಭಾರತ ಪರಿಕಲ್ಪನೆ ಸಾಕಾರಗೊಳಿಸಲು ಚೀನಾದ ಮೇಲಿನ ಅವಲಂಬನೆಯನ್ನು ತಪ್ಪಿಸಬೇಕು - ನಿತಿನ್ ಗಡ್ಕರಿ, ಕೇಂದ್ರ ಸಚಿವ
 ಪಾಕಿಸ್ತಾನವನ್ನು ಅವಲಂಬಿಸುವುದನ್ನು ಬಿಟ್ಟು ಬಿಜೆಪಿ ಸ್ವಾವಲಂಬಿ ಪಕ್ಷವಾಗಿ ಬೆಳೆಯುವುದು ಯಾವಾಗ?


ಸರಕಾರ ಆನ್‌ಲೈನ್‌ನಲ್ಲಿ ಮದ್ಯ ಮಾರಾಟದಂತಹ ಮನೆಹಾಳು ಚಿಂತನೆಯನ್ನು ಕೈ ಬಿಡಬೇಕು - ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
 ಮದ್ಯವೇ ಮನೆಹಾಳು. ಹೀಗಿರುವಾಗ ಉಳಿದ ಕಡೆ ಮಾರಾಟ ಮಾಡುವುದು ಸರಿಯೇ?


ಪ್ರಕೃತಿ ಮುನಿದಾಗ ಯಾರಿಂದಲೂ ತಡೆಯಲು ಸಾಧ್ಯವಿಲ್ಲ - ಪ್ರತಾಪ ಸಿಂಹ, ಸಂಸದ
ಪ್ರಕೃತಿ ಯಾರವಳು? ಆನ್‌ಲೈನ್ ಚಾಟಿಂಗ್ ಮಾಡುವಾಗ ಎಚ್ಚರಿಕೆ ಇರಲಿ.


ಮುಂದಿನ ಎರಡು ವರ್ಷಗಳಲ್ಲಿ ಔಷಧವಲಯವು ಆತ್ಮ ನಿರ್ಭರವಾಗಿ ಹೊರಹೊಮ್ಮಲಿದೆ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಸೆಗಣಿ, ಗೋಮೂತ್ರಗಳ ಮೂಲಕವೇ?


ಶ್ರೀರಾಮ, ಹಿಂದುತ್ವ ನಮ್ಮ ದೇಶದ ಆಸ್ತಿ, ಅದು ಒಂದು ಪಕ್ಷದ ಸೊತ್ತಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಮುಂದೊಂದು ದಿನ ‘ಆರೆಸ್ಸೆಸ್ ನಮ್ಮ ದೇಶದ ಆಸ್ತಿ’ ಬಿಜೆಪಿಯ ಸೊತ್ತಲ್ಲ ಎಂದು ಹೇಳಿದರೆ ಅಚ್ಚರಿಯಿಲ್ಲ.


ಹತ್ತು ರಾಜ್ಯಗಳು ಕೊರೋನ ಗೆದ್ದರೆ ಇಡೀ ದೇಶ ಗೆದ್ದಂತೆ-ನರೇಂದ್ರ ಮೋದಿ, ಪ್ರಧಾನಿ

 ಮತ್ತು ಆ ಹತ್ತು ರಾಜ್ಯಗಳು ಭಾರತದೊಳಗಿನದೇ ಆಗಿರಬೇಕು.


ನಾನು ಪಕ್ಷಕ್ಕೆ ಮರಳಿದ್ದೇನೆ ಎಂದು ಹೇಳಲಾಗದು. ಏಕೆಂದರೆ ನಾನು ಕಾಂಗ್ರೆಸ್ ತೊರೆದೇ ಇಲ್ಲ- ಸಚಿನ್ ಪೈಲಟ್, ರಾಜಸ್ಥಾನ ಮಾಜಿ ಉಪ ಮುಖ್ಯಮಂತ್ರಿ
 ಮತ್ತೆ, ಏಕಾಏಕಿ ಮಾಜಿ ಉಪಮುಖ್ಯಮಂತ್ರಿಯಾದುದೇಕೆ?


 ಸ್ವದೇಶಿಯಾಗಬೇಕು ಎನ್ನುವ ಮಾತ್ರಕ್ಕೆ ಎಲ್ಲ ವಿದೇಶಿ ವಸ್ತುಗಳನ್ನು ನಿಷೇಧಿಸುವುದು ಸರಿಯಲ್ಲ -ಮೋಹನ್ ಭಾಗವತ್,ಆರೆಸ್ಸೆಸ್ ಮುಖಂಡ
ಹೌದು, ವಿದೇಶದಿಂದ ಬರುವ ಹಣವನ್ನಂತೂ ನಿರಾಕರಿಸುವುದು ಸಾಧ್ಯವೇ ಇಲ್ಲ.

ದಲಿತರು ಜಾಗೃತರಾಗಿದ್ದಾರೆ - ಹಿತೈಷಿಗಳು ಯಾರು, ಹಿತ ಶತ್ರುಗಳು ಯಾರು ಎನ್ನುವುದು ಅವರಿಗೆ ಈಗ ಗೊತ್ತಾಗಿದೆ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ನೀವು ಕೂಡ ಬೇಗ ಜಾಗೃತರಾಗಿ.

share
ಪಿ.ಎ.ರೈ
ಪಿ.ಎ.ರೈ
Next Story
X