ಕಾವೂರು: ಅನಧಿಕೃತ ಗೂಡಂಗಡಿ, ಮೀನು ಮಾರುಕಟ್ಟೆ ತೆರವು
ಮಂಗಳೂರು, ಆ. 24: ನಗರದ ಕಾವೂರು ಜಂಕ್ಷನ್ನಲ್ಲಿ ಕೆಲವು ಸಮಯದಿಂದಿದ್ದ ಅನಧಿಕೃತ ಗೂಡಂಗಡಿ ಮತ್ತು ಮೀನು ಮಾರುಕಟ್ಟೆಯನ್ನು ಸೋಮವಾರ ಬೆಳಗ್ಗೆ ತೆರವುಗೊಳಿಸಲಾಗಿದೆ.
ಮನಪಾ ಕಂದಾಯ ಅಧಿಕಾರಿ ಪ್ರವೀಣ್ ನೇತೃತ್ವದ ತಂಡವು ಬೆಳಗ್ಗೆ ಸುಮಾರು 7 ಗಂಟೆಗೆ 15ಕ್ಕೂ ಅಧಿಕ ಗೂಡಂಗಡಿಗಳು ಮತ್ತು ಮೀನು ಮಾರುಕಟ್ಟೆಯನ್ನು ತೆರವುಗೊಳಿಸಿದರು. ಈ ಸಂದರ್ಭ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.