ಅಂದರ್ ಬಾಹರ್: ಐವರ ಬಂಧನ
ಉಡುಪಿ, ಆ.24: ನಿಟ್ಟೂರು ರಿಕ್ಷಾ ನಿಲ್ದಾಣ ಬಳಿ ಆ.23ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಕೊಡಂಕೂರಿನ ಸೋಮನಾಥ(36), ಗಣೇಶ್(58), ರಾಘವ ಶೇರಿಗಾರ್ (61), ಅಡ್ಕದಕಟ್ಟೆಯ ಶಂಕರ(43), ವಿಷ್ಣುಮೂರ್ತಿ ನಗರದ ರೋಹಿತ್ (33) ಬಂಧಿತ ಆರೋಪಿಗಳು. ಇವರಿಂದ 2,530ರೂ. ನಗದು ವಶಪಡಿಸಿಕೊಳ್ಳ ಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story