ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣ ತಡೆಯಲು ಸಿಪಿಎಂ ಒತ್ತಾಯ
ಮಂಗಳೂರು, ಆ.24: ದೇಶದ ಲಾಭದಾಯಕ ಸಾರ್ವಜನಿಕ ಸಂಸ್ಥೆಗಳು ಮತ್ತು ಆಸ್ತಿಗಳ ಅಕ್ರಮ ಮಾರಾಟವನ್ನು ಕೇಂದ್ರ ಸರಕಾರ ಮುಂದುವರೆ ಸಿದೆ. ಇದೀಗ ಅದಾನಿಯ ಕಂಪನಿಗೆ ಅಕ್ರಮ ದರಕ್ಕೆ ವಿಶ್ವದ ಅತ್ಯಂತ ಶ್ರೇಷ್ಠ ದರ್ಜೆಯ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾರಾಟ ಮಾಡಲು ಮುಂದಾಗಿರುವುದನ್ನು ಸಿಪಿಎಂ ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ.
ರಾಜ್ಯ ಸರಕಾರ ಲಾಭದಾಯಕವಾಗಿ ನಡೆಯುವ ಈ ಸಂಸ್ಥೆಯ ಖಾಸಗೀಕರಣವನ್ನು ತಡೆಯಲು ಮುಂದಾಗದೇ ಮೌನ ವಹಿಸಿ ನೆರವಾಗುತ್ತಿ ರುವುದು ಅಕ್ಷಮ್ಯವಾಗಿದೆ. ಕೇರಳದ ಎಡ ಮತ್ತು ಪ್ರಜಾಸತ್ತಾತ್ಮಕ ರಂಗದ ಸರಕಾರ ತಿರುವನಂತಪುರಂನ ವಿಮಾನ ನಿಲ್ದಾಣವನ್ನು ಉಳಿಸಿ ಕೊಳ್ಳಲು ಪ್ರಯತ್ನ ಪಡುತ್ತಿರುವಾಗ ಕರ್ನಾಟಕ ಸರಕಾರದ ಈ ಅಸಹನೀಯ ಮೌನ ಖಂಡನೀಯವಾಗಿದೆ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.
Next Story