ಹಿರ್ಗಾನ ಗೇರುಬೀಜದ ಎಣ್ಣೆ ಕಾರ್ಖಾನೆಯಲ್ಲಿ ಅಗ್ನಿದುರಂತ
► ಅಗ್ನಿಶಾಮಕಳದಿಂದ 15ಗಂಟೆಗಳ ಕಾರ್ಯಾಚರಣೆ ► 1.5ಕೋ.ರೂ. ನಷ್ಟ
ಕಾರ್ಕಳ, ಆ.25: ಹಿರ್ಗಾನ ಹಾರ್ಜಡ್ಡು ಮಂಗಳಕಲ್ಲು ಎಂಬಲ್ಲಿರುವ ಗೇರು ಬೀಜದ ಎಣ್ಣೆ ಕಾರ್ಖಾನೆ ‘ಮಾಧವಿ ಇಂಡಸ್ಟ್ರೀಸ್’ನಲ್ಲಿ ಸೋಮವಾರ ಮಧ್ಯ ರಾತ್ರಿ ಸಂಭವಿಸಿದ ಅಗ್ನಿ ದುರಂತದಿಂದ ಇಡೀ ಕಾರ್ಖಾನೆ ಬೆಂಕಿಗೆ ಆಹುತಿ ಯಾಗಿ, ಕೋಟ್ಯಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಸಾಣೂರಿನ ಪ್ರಕಾಶ್ ಪುತ್ರನ್ ಎಂಬವರ ಮಾಲಕತ್ವದ ಈ ಕಾರ್ಖಾನೆ ಹಾಗೂ ಅದರಲ್ಲಿದ್ದ ಸೊತ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸುಮಾರು 1.5ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಒಟ್ಟು 30 ಮಂದಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ 15 ಗಂಟೆಗಳ ಕಾಲ ನಡೆಸಿದ ಕಾರ್ಯಚರಣೆಯಲ್ಲಿ ಬೆಂಕಿ ನಂದಿಸ ಲಾಯಿತು.
ಕಾರ್ಖಾನೆಯಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿಯ ಜ್ವಾಲೆ ಇಡೀ ಕಾರ್ಖಾನೆಗೆ ಹಬ್ಬಿತೆನ್ನಲಾಗಿದೆ. ಈ ಬಗ್ಗೆ ತಕ್ಷಣ ಮಾಹಿತಿ ಪಡೆದು ನಸುಕಿನ ವೇಳೆ ಒಂದು ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಮತ್ತು ಉಡುಪಿಯ ಒಟ್ಟು ನಾಲ್ಕು ಅಗ್ನಿ ಶಾಮಕದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಇಳಿದವು.
ಇದಕ್ಕಾಗಿ ಎರಡು ಜೆಸಿಬಿ ಹಾಗೂ ಒಂದು ಹಿಟಾಚಿಯನ್ನು ಕೂಡ ಬಳಸಿ ಕೊಳ್ಳಲಾಯಿತು. ಅಪರಾಹ್ನ 3:30ರ ಸುಮಾರಿಗೆ ಸಂಪೂರ್ಣ ಬೆಂಕಿ ಯನ್ನು ನಂದಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳು ಯಶಸ್ವಿಯಾದರು. ಈ ದುರಂತದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಖಾನೆಯ ಕಟ್ಟಡ, ಒಳಗೆ ಇದ್ದ 50ಟನ್ ಗೇರುಬೀಜದ ಎಣ್ಣೆ, 35 ಟನ್ ಗೇರುಬೀಜದ ಶೆಲ್ಕೇಕ್, 1.5ಲಕ್ಷ ಶೆಲ್ಸ್, ಯಂತ್ರೋಕಪಣ, ಎಣ್ಣೆ ದಾಸ್ತುನು ಘಟಕ, ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಹೋಗಿವೆ. ಕಾರ್ಖಾನೆಯಲ್ಲಿದ್ದ ಎರಡು ಈಚರ್ ವಾಹನಗಳು ಭಾಗಃಶ ಸುಟ್ಟು ಹೋಗಿರು ವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಮುಖ್ಯ ಅಗ್ನಿಶಾಮಕದಳ ಅಧಿಕಾರಿ ತಿಪ್ಪೇಸ್ವಾಮಿ ಮಾರ್ಗ ದರ್ಶನದಲ್ಲಿ ಉಡುಪಿ ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ವಸಂತ ಕುಮಾರ್ ಸಹಭಾಗಿತ್ವದಲ್ಲಿ ಕಾರ್ಕಳ ಅಗ್ನಿಶಾಮಕದಳ ಠಾಣಾಧಿಕಾರಿ ಬಿ.ಎಂ. ಸಂಜೀವ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.