ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ: ವಾಟ್ಸ್ ಆ್ಯಪ್ ಸಂದೇಶದಿಂದ ಹೊಸ ತಿರುವು
ಹೊಸದಿಲ್ಲಿ, ಆ. 26: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ‘ಮಾದಕ ದ್ರವ್ಯ’ದ ಆಯಾಮದ ಬಗೆಗಿನ ವರದಿಗಳು ಹೊರಬಂದ ಒಂದು ದಿನದ ನಂತರ ರಿಯಾ ಚಕ್ರವರ್ತಿ ಅವರ ವ್ಯಾಟ್ಸ್ಆ್ಯಪ್ ಸಂಭಾಷಣೆಗಳು ಅಕ್ರಮ ‘ಮಾದಕ ದ್ರವ್ಯ’ದ ಕುರಿತು ಚರ್ಚೆ ನಡೆದಿರುವುದರ ಬಗ್ಗೆ ಬೆಳಕು ಚೆಲ್ಲಿದೆ.
ಸುದ್ದಿವಾಹಿನಿಯೊಂದಕ್ಕೆ ದೊರಕಿದ ವಿಶೇಷವಾದ ವ್ಯಾಟ್ಸ್ಆ್ಯಪ್ ಸಂಭಾಷಣೆಯಲ್ಲಿ ರಿಯಾ ಎಂಡಿಎಂಎ (ಮೀಥೈಲೆನೆಡಿಯೋಕ್ಸಿ- ಮೀಥಾಮ್ಫೇಟಾಮೈನ್) ಹಾಗೂ ಮರಿಜುವಾನ ಬಳಸಿದ ಕುರಿತು ಮಾತುಕತೆ ನಡೆಸಿದ್ದಾರೆ.
‘‘ನಿಮ್ಮಲ್ಲಿ ಎಂಡಿ ಇದೆಯೇ ?’’ ಎಂದು ಪ್ರಶ್ನಿಸಿದ ಗೌರವ್ ಆರ್ಯ ಅವರಿಗೆ ರಿಯಾ ಚಕ್ರವರ್ತಿ, ‘‘ನಾವು ಕಠಿಣ ಮಾದಕ ದ್ರವ್ಯದ ಕುರಿತು ಮಾತನಾಡುವುದಾದರೆ, ನಾನು ಅದನ್ನು ಹೆಚ್ಚು ಬಳಕೆ ಮಾಡಿಲ್ಲ. ಎಂಡಿಎಂಎಯನ್ನು ಒಮ್ಮೆ ಮಾತ್ರ ಪ್ರಯತ್ನಿಸಿದ್ದೇನೆ’’ ಎಂದು ಸಂದೇಶ ರವಾನಿಸಿದ್ದಾರೆ. ಈ ಸಂಭಾಷಣೆ 2017 ಮಾರ್ಚ್ನಲ್ಲಿ ನಡೆದಿದೆ.
Next Story