ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿಗೆ ‘ಸೌಹಾರ್ದ ಮೂಡಬಿದ್ರಿ’ ತಂಡದಿಂದ ಸನ್ಮಾನ
ಮೂಡುಬಿದಿರೆ, ಆ.27: ಮೂಡುಬಿದಿರೆ ಯೋಜನಾ ಪ್ರಾಧಿಕಾರ(ಮೂಡಾ)ದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೇಘನಾಥ ಶೆಟ್ಟಿಯವರನ್ನು ‘ಸೌಹಾರ್ದ ಮೂಡಬಿದ್ರಿ’ ತಂಡದ ವತಿಯಿಂದ ಅವರ ಕಚೇರಿಯಲ್ಲಿ ಇತ್ತೀಚೆಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ‘ಸೌಹಾರ್ದ ಮೂಡಬಿದ್ರಿ’ ಅಧ್ಯಕ್ಷ ಅಬುಲಾಲ ಪುತ್ತಿಗೆ, ಕಾರ್ಯದರ್ಶಿ ಮುಹಮ್ಮದ್ ಶರೀಫ್, ಖಜಾಂಚಿ ರಿಝ್ವಿನ್ ಅಹ್ಮದ್, ಸದಸ್ಯರಾದ ಸಿ.ಎಚ್.ಅಬ್ದುಲ್ ಗಫೂರ್, ಹಸದುಲ್ಲಾ ಇಸ್ಮಾಯೀಲ್, ಮಕ್ಬೂಲ್ ಹುಸೈನ್, ಅಬ್ದುಲ್ ಹಮೀದ್, ಮುಹಮ್ಮದ್ ಆರಿಫ್, ಮುಹಮ್ಮದ್ ಅರ್ಷದ್, ಮುಹಮ್ಮದ್ ಫಾರೂಕ್ ಕೆ. ಉಪಸ್ಥಿತರಿದ್ದರು.