ಉಡುಪಿ: ಸರಕಾರಿ ಕೋವಿಡ್ ಆಸ್ಪತ್ರೆಗೆ ಇನ್ನೂ ಬಿಡುಗಡೆಯಾಗದ ನಿರ್ವಹಣೆ ಬಿಲ್ !
ಉಡುಪಿ, ಆ.28: ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವ ಕುಂದಾಪುರ ಹಾಗೂ ಕಾರ್ಕಳ ತಾಲೂಕಿನ ಕೋವಿಡ್-19 ಸರಕಾರಿ ಆಸ್ಪತ್ರೆ ಗಳು ನಿರ್ವ ಹಣೆಗೆ ಹಣ ಇಲ್ಲದೆ ತೊಂದರೆ ಅನುಭವಿಸುತ್ತಿವೆ. ಕೋವಿಡ್-19 ಮೃತರ ಅಂತ್ಯಕ್ರಿಯೆಯ ಬಿಲ್ಗಳನ್ನು ಸರಕಾರ ಇನ್ನು ಕೂಡ ಬಿಡುಗಡೆ ಮಾಡಿಲ್ಲ.
ಕೊರೋನ ಸೋಂಕು ತೀವ್ರಗತಿಯ ಹೆಚ್ಚಳದ ಬಳಿಕ ಕುಂದಾಪುರ ಹಾಗೂ ಕಾರ್ಕಳ ಸರಕಾರಿ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ -19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗಿದೆ. ಇದರಿಂದ ಈ ಸರಕಾರಿ ಆಸ್ಪತ್ರೆಗಳ ನಿರ್ವಹಣೆಗೆ ಈ ಮೊದಲು ಎಪಿಎಲ್ ಚೀಟಿಯವರಿಗೆ ಚಿಕಿತ್ಸೆ ನೀಡಿ ಬರುತ್ತಿದ್ದ ಆದಾಯ ಮತ್ತು ಆರೋಗ್ಯ ರಕ್ಷಾ ಸಮಿತಿಯ ಆದಾಯ ಹಾಗೂ ಇತರ ಶಸ್ತ್ರ ಚಿಕಿತ್ಸೆ ಮೂಲಕ ಸಿಗುತ್ತಿದ್ದ ಆಯುಷ್ಮಾನ್ ಭಾರತ ವಿಮೆಯ ಆದಾಯಕ್ಕೆ ಹೊಡೆದ ಬಿದ್ದಿದೆ.
ಕುಂದಾಪುರ ಸರಕಾರಿ ಆಸ್ಪತ್ರೆಯ ಜನರೇಟರ್ಗೆ ಹಾಕಿದ ಡೀಸೆಲ್ ಬಿಲ್ 3.5 ಲಕ್ಷ ರೂ. ಪೈಕಿ ಈವರೆಗೆ 50 ಸಾವಿರ ರೂ. ಮಾತ್ರ ಬಿಡುಗಡೆ ಯಾಗಿದೆ. ಉಳಿದ 3 ಲಕ್ಷ ರೂ. ಹಣ ಇನ್ನು ಬಂದಿಲ್ಲ. ಇದೀಗ 5.5 ಲಕ್ಷ ರೂ. ಡೀಸೆಲ್ ಬಿಲ್ ಬೇಡಿಕೆ ಬಾಕಿ ಇದೆ. ನಿರ್ವಹಣೆಗೆ ಬರುತ್ತಿದ್ದ ಆದಾಯ ಮೂಲಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಜನರೇಟರ್ ಬಿಲ್ ಪಾವತಿಸಲು ಸಾಧ್ಯ ವಾಗದೆ ಬಾಕಿ ಉಳಿದುಕೊಂಡಿದೆ ಎನ್ನುತ್ತಾರೆ ಅಧಿಕಾರಿಗಳು.
ತಾಲೂಕಿನ ಇತರ ಆಸ್ಪತ್ರೆಗಳಿಗೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸೇರಿದಂತೆ ಸಾಂಕ್ರಾಮಿಕ ಕಾಯಿಲೆ ನಿರ್ವಹಣೆಗಾಗಿ 5 ಲಕ್ಷ ರೂ. ತಾಲೂಕು ಆರೋಗ್ಯಾಧಿಕಾರಿಗಳಿಗೆ ಐದು ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ ಕೊರೊನಾ ಪೀಡಿತರ ಚಿಕಿತ್ಸೆಯನ್ನು ಆಯುಷ್ಮಾನ್ ವ್ಯಾಪ್ತಿಗೆ ತಂದಿದ್ದರೂ ಆ ಹಣ ಸರಕಾರಿ ಆಸ್ಪತ್ರೆಗೆ ಇ್ನು ಬಿಡುಗಡೆಯಾಗಿಲ್ಲ.
ಈ ಆಸ್ಪತ್ರೆಗಳಿಗೆ ಮಾಸ್ಕ್ ಹಾಗೂ ಪಿಪಿಇ ಕಿಟ್ಗಳನ್ನು ಜಿಲ್ಲಾ ಆರೋಗ್ಯ ಇಲಾಖೆಯಿಂದ ಪೂರೈಕೆ ಮಾಡಲಾಗುತ್ತಿದೆ. ಔಷಧವೂ ಅಲ್ಲಿಂದಲೇ ಸರಬ ರಾಜಾಗುತ್ತಿದೆ. ಅಲ್ಲದೆ ವಾರ್ಷಿಕವಾಗಿ ರಾಷ್ಟ್ರೀಯ ಔಷಧ ನಿಧಿಯಿಂದ ಬಿಡು ಗಡೆಯಾಗುವ 10 ಲಕ್ಷ ರೂ. ಹಣವನ್ನು ಅಗತ್ಯ ಔಷಧ ಖರೀದಿಗೆ ಬಳಕೆ ಮಾಡಲಾಗುತ್ತಿದೆ.
ಈ ಮಧ್ಯೆ ಕೋವಿಡ್-19 ಮೃತರ ಅಂತ್ಯಕ್ರಿಯೆಯನ್ನು ಮಾರ್ಗಸೂಚಿ ಪ್ರಕಾರ ಆಸ್ಪತ್ರೆಯವರೇ ನಿರ್ವಹಿಸಬೇಕಾಗುತ್ತದೆ. ಹಾಗೆ ಅಂತ್ಯಕ್ರಿಯೆ ನಡೆಸಿದ ಸಶ್ಮಾನಗಳ ಬಿಲ್ಗಳನ್ನು ಸರಕಾರ ಇನ್ನು ಕೂಡ ಬಿಡುಗಡೆ ಮಾಡಿಲ್ಲ ಎಂದು ಆರೋಪಗಳು ಕೂಡ ಕೇಳಿಬಂದಿವೆ.
ಕೊರೋನ ಚಿಕಿತ್ಸೆ ಸಂಬಂಧ ಈ ಮೊದಲು ತಾಲೂಕು ಆರೋಗ್ಯಾಧಿಕಾರಿ ಗಳಿಗೆ ತಲಾ 5 ಲಕ್ಷ ರೂ.ಗಳಂತೆ ಅನುದಾನ ನೀಡಲಾಗಿತ್ತು. ಇದೀಗ ಅನು ದಾನದ ಕೊರತೆಯ ಹಿನ್ನೆಲೆಯಲ್ಲಿ ಅನುದಾನಕ್ಕಾಗಿ ಸರಕಾರಕ್ಕೆ ಪತ್ರ ಬರೆಯ ಲಾಗಿದೆ. ಈ ಮಧ್ಯೆ ಕೋವಿಡ್-19 ಆಸ್ಪತ್ರೆಗಳ ಬಿಲ್ ಪಾವತಿಯನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿ ಖಾತೆಯಿಂದ ನೀಡಲಾಗುವುು ಎಂಬುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.
-ಡಾ.ಸುಧೀರ್ಚಂದ್ರ ಸೂಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಉಡುಪಿ ಜಿಲ್ಲೆ