ಮರಳಿ ಸಮುದ್ರ ಸೇರಿದ ಕಡಲಾಮೆ, ‘ಮಾಸ್ಕಡ್ ಬೂಬಿ’ ಹಕ್ಕಿ!
ಕುಂದಾಪುರ, ಆ.28: ಕಳೆದ ಹಲವು ದಿನಗಳಿಂದ ಅರಣ್ಯ ಇಲಾಖೆ ಆರೈಕೆ ಯಲ್ಲಿದ್ದ ಕಡಲಾಮೆ ಹಾಗೂ ಕಡಲ ಹಕ್ಕಿ ಇದೀಗ ಸಂಪೂರ್ಣ ಗುಣಮುಖ ವಾಗಿ ಮತ್ತೆ ಸಮುದ್ರ ಸೇರಿವೆ.
ಒಂದು ತಿಂಗಳ ಹಿಂದೆ ಬೀಜಾಡಿ ಕಡಲ ತೀರದಲ್ಲಿ ಸುಮಾರು 20 ಕೆ.ಜಿ. ತೂಕದ ಕಡಲಾಮೆ ಗಾಯಗೊಂಡ ಸ್ಥಿತಿಯಲ್ಲಿ ಹಾಗೂ 15 ದಿನಗಳ ಹಿಂದೆ ಕುಂದಾಪುರ ಕೋಡಿ ಕಡಲ ಕಿನಾರೆಯಲ್ಲಿ ರೆಕ್ಕೆ ಹಾನಿಗೊಂಡ ಅತ್ಯಂತ ದೊಡ್ಡ ಗಾತ್ರದ ಕಡಲ ಹಕ್ಕಿ ‘ಮಾಸ್ಕಡ್ ಬೂಬಿ’ಯನ್ನು ರಕ್ಷಿಸಲಾಗಿತ್ತು.
ಹರಿತವಾದ ಮೀನಿನ ಬಲೆಯಿಂದ ಕಡಲ ಆಮೆ ಕಾಲು ಗಾಯಗೊಂಡಿ ದ್ದರೆ, ಬಲವಾದ ಗಾಳಿಯಿಂದ ಹಕ್ಕಿಯ ರೆಕ್ಕೆಗೆ ಹಾನಿಯಾಗಿತ್ತು. ಇವುಗಳಿಗೆ ಸಾಗರ ಜೀವಿಗಳ ತಜ್ಞ ಹಾಗೂ ವೈದ್ಯ ಡಾ.ಶಾಂತನು ಕಳಂಬೆ ಕುಂದಾಪುರ ವಲಯ ಅರಣ್ಯ ಇಲಾಖೆಯ ನಿರ್ದೇಶನದಂತೆ ಚಿಕಿತ್ಸೆ ನೀಡಿದರು.
ಹಲವು ದಿನಗಳ ಪಾಲನೆ-ಪೋಷಣೆಯಿಂದ ಆಮೆ ಮತ್ತು ಹಕ್ಕಿ ಇದೀಗ ಸಂಪೂರ್ಣ ಚೇತರಿಸಿಕೊಂಡಿದೆ. ಇವುಗಳನ್ನು ಆ.27ರಂದು ಅರಣ್ಯ ಇಲಾಖೆ ಸಿಬ್ಬಂದಿ, ಬೋಟಿನ ಮೂಲಕ ಸುಮಾರು ಒಂದು ಕಿ.ಮೀ. ದೂರದ ಕಡಲಿಗೆ ಕೊಂಡೊಯ್ಯುದ್ದು ಬಿಟ್ಟಿದ್ದಾರೆ. ಈ ಮೂಲಕ ಈ ಎರಡು ಜೀವಿಗಳು ಆರೋಗ್ಯ ವಂತವಾಗಿ ಮರಳಿ ಸಮುದ್ರ ಸೇರಿವೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ತಿಳಿಸಿದ್ದಾರೆ.