ಕಾಸರಗೋಡು - ಸುಳ್ಯ ನಡುವಿನ ರಸ್ತೆ ತೆರೆಯಲು ಒತ್ತಾಯಿಸಿ ಪ್ರತಿಭಟನೆ

ಕಾಸರಗೋಡು : ಹೈಕೋರ್ಟ್ ನ ಮಧ್ಯಂತರ ಆದೇಶ ವಿದ್ದರೂ ತೆರೆಯದ ಕಾಸರಗೋಡು - ಸುಳ್ಯ ನಡುವಿನ ಜಾಲ್ಸೂ ರು ರಸ್ತೆಯನ್ನು ಪ್ರತಿಭಟನೆ ನಡೆಸಿ ಪೊಲೀಸರಿಂದ ತೆರವುಗೊಳಿಸಿದ ಘಟನೆ ಇಂದು ನಡೆದಿದೆ.
ಜಾಲ್ಸೂ ರು ರಸ್ತೆಯ ಕೊಟ್ಯಾಡಿಯಲ್ಲಿ ಮರದ ತುಂಡು ಹಾಗೂ ಹಗ್ಗಗಳನ್ನು ಕಟ್ಟಿ ರಸ್ತೆ ಬಂದ್ ಮಾಡಲಾಗಿತ್ತು . ಹೈಕೋರ್ಟ್ ಆದೇಶದಂತೆ ಗುರುವಾರ ಬೆಳಗ್ಗೆ 10 ಗಂಟೆಗೆ ಮೊದಲು ಈ ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸಬೇಕಿತ್ತು . ಆದರೆ ಇಂದು ಶುಕ್ರವಾರ 11. 30 ಕಳೆದರೂ ತೆರೆಯದಿರುವುದರಿಂದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .
ಪ್ರತಿಭಟನೆ ಹಿನ್ನಲೆಯಲ್ಲಿ ಅಧಿಕಾರಿಗಳು ನಡೆಸಿದ ಮಾತುಕತೆಯಿಂದ ರಸ್ತೆ ತೆರವುಗೊಳಿಸಲು , ಗಡಿಯ ಕಾರಡ್ಕ , ದೇಲಂಪಾಡಿ , ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯವರಿಗೆ ಗುರುತು ಚೀಟಿ ತೋರಿಸಿ ಸಂಚರಿಸಲು ಅನುಮತಿ ನೀಡುವುದಾಗಿ ಭರವಸೆ ನೀಡಿದರು . ಉಳಿದವರು ಕೋವಿಡ್ ಜಾಗ್ರತಾ ಪೋರ್ಟಲ್ ನಲ್ಲಿ ನೋಂದಾವಣೆ ಮಾಡಿ ಸಂಚಾರ ನಡೆಸಬಹುದು ಎಂಬ ಭರವಸೆ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು .
ಪ್ರತಿಭಟನೆಯನ್ನು ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್ ಉದ್ಘಾಟಿಸಿದರು . ಬಿಜೆಪಿ ರಾಷ್ಟೀಯ ಸಮಿತಿ ಸದಸ್ಯೆ ಪ್ರಮೀಳಾ ಸಿ . ನಾಯ್ಕ್ , ಸುಕು ಮಾರ್ ಕುದ್ರೆಪ್ಪಾಡಿ , ಜಿಲ್ಲಾ ಉಪಾಧ್ಯಕ್ಷೆ ಎಂ . ,ಜನನಿ , ಯುವ ಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು , ಹರೀಶ್ ಗೋಸಾಡ , ವಸಂತ ಕೆ ., ಪಿ .ಆರ್ ಸುನಿಲ್ , ರಕ್ಷಿತ್ ಕೆದಿಲಾಯ ಮೊದಲಾದವರು ನೇತೃತ್ವ ನೀಡಿದರು.










