ಮಂಗಳೂರು ಧರ್ಮಪ್ರಾಂತ: ವಿದ್ಯಾರ್ಥಿಗಳಿಗೆ ಧನ ಸಹಾಯ
ಮಂಗಳೂರು, ಆ. 29: ಮಂಗಳೂರು ಧರ್ಮಪ್ರಾಂತದ ವತಿಯಿಂದ ಸಿಒಡಿಪಿ ಸಂಸ್ಥೆಯ ಮೂಲಕ ಅರ್ಹ 53 ವಿದ್ಯಾರ್ಥಿಗಳಿಗೆ 2.57 ಲಕ್ಷ ರೂ. ಧನ ಸಹಾಯವನ್ನು ಮಂಗಳೂರು ಬಿಷಪ್ ವಂ.ಡಾ.ಪೀಟರ್ ಪೌಲ್ ಸಲ್ಡಾನ್ಹಾ ಅವರು ಶನಿವಾರ ಬಿಷಪ್ ಹೌಸ್ನಲ್ಲಿ ವಿತರಿಸಿದರು.
ಬಳಿಕ ಮಾತನಾಡಿದ ಅವರು ಏಸು ಸ್ವಾಮಿ ಈ ಲೋಕದ ಬೆಳಕು ಮತ್ತು ಭೂಮಿಗೆ ಉಪ್ಪುಆಗಲು ನಮಗೆ ಕರೆಕೊಟ್ಟಿದ್ದಾರೆ. ಅವರ ಹಿಂಬಾಲಕರದ ನಾವು ಪರರಿಗೆ ಉಪಕಾರ ಮಾಡಿ ಬದುಕಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ವಿಕ್ಟರ್ ವಿಜಯ್ ಲೋಬೊ, ಸಿಒಡಿಪಿ ಸಂಸ್ಥೆಯ ನಿರ್ದೇಶಕ ವಂ.ಒಸ್ವಾಲ್ಡ್ ಮೊಂತೇರೋ, ಕೆನರಾ ಸಂಪರ್ಕ ಕೇಂದ್ರದ ನಿರ್ದೇಶಕ ವಂ.ರಿಚರ್ಡ್ ಡಿಸೋಜ ಉಪಸ್ಥಿತರಿದ್ದರು.
Next Story