ಸುದರ್ಶನ ಟಿವಿ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಭಟ್ಕಳ: ಸುದರ್ಶನ ಟಿವಿಯಲ್ಲಿ 'ಯುಪಿಎಸ್ಸಿ ಜಿಹಾದ್' ಎಂಬ ಹೆಸರಲ್ಲಿ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುವುದಾಗಿ ಘೋಷಿಸಿದ್ದು ಇದರ ವಿರುದ್ಧ ಆಲ್ ಇಂಡಿಯಾ ಮುಸ್ಲಿಮ್ ಡೌಲಪ್ಮೆಂಟ್ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಮುಝಫರ್ ಶೇಕ್ ದೂರನ್ನು ನೀಡಿದ್ದಾರೆ.
ಸುದರ್ಶನ್ ಟಿವಿಯ ಪ್ರಧಾನ ಸಂಪಾದಕ ಸುರೇಶ್ ಚೌಹಂಕೆ ಶುಕ್ರವಾರದಿಂದ ಕಾರ್ಯಕ್ರಮವೊಂದನ್ನು ಪ್ರಸ್ತುತಪಡಿಸುವುದಾಗಿ ಘೋಷಿಸಿದ್ದು, ಇದರಲ್ಲಿ ಮುಸ್ಲಿಮರು ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದರ ಮೂಲಕ ಯುಪಿಎಸ್ಸಿ ಜಿಹಾದ್ ಆರಂಭಿಸಿದ್ದಾರೆ ಎಂದು ಹೇಳಿಕೆ ನೀಡಿದ್ದು, ಇದು ಸಮಾಜದಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ ಎಂದು ದೂರಲಾಗಿದೆ.
ಅಖಿಲ ಭಾರತ ಮುಸ್ಲಿಂ ಅಭಿವೃದ್ಧಿ ವೇದಿಕೆ (ಎಐಎಂಡಿಎಫ್) ಈ ಕಾರ್ಯಕ್ರಮವನ್ನು ದ್ವೇಷವನ್ನು ಹರಡುವ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದಾಗಿದ್ದು ಮತ್ತು ಐಪಿಸಿಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಸುರೇಶ್ ಚೌಹಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.
ಸುದರ್ಶನ್ ಟಿವಿಯ ಸಂಪಾದಕ ಸುರೇಶ್ ಚೌಹಂಕೆ ತಮ್ಮ ಮಾನಹಾನಿಕರ ಹೇಳಿಕೆಗಳು ಮತ್ತು ವಿಷಕಾರಿ ಟೀಕೆಗಳ ಮೂಲಕ ದ್ವೇಷವನ್ನು ಹರಡಲು ಈ ಹಿಂದೆ ಹಲವಾರು ಬಾರಿ ಪ್ರಯತ್ನಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದ್ದರಿಂದ, ಈ ಬಾರಿ ಅವರು ಕೈಗೊಂಡ ಕ್ರಮವನ್ನು ಲಘುವಾಗಿ ತೆಗೆದುಕೊಳ್ಳಬಾರದು. ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.