ಹಳೆಕೋಟೆ: ಸಾಮೂಹಿಕ ‘ಮುಂಜಿ’ ಕಾರ್ಯಕ್ರಮ
ಉಳ್ಳಾಲ, ಆ. 30: ಉಳ್ಳಾಲ ಹಳೆಕೋಟೆ ಹಳೆ ವಿದ್ಯಾರ್ಥಿ ಸಂಘ ಮರ್ಖಲ್ ಇಸ್ಲಾಮ್ ಮದ್ರಸದ ವತಿಯಿಂದ 24 ಮಕ್ಕಳಿಗೆ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮವು ರವಿವಾರ ಜರುಗಿತು.
ಈ ಸಂದರ್ಭ ಕುರ್ಆನ್ ಕಂಠಪಾಠ ಮಾಡಿದ ಬಾಲಕ ಹಾಫಿಳ್ ಮುಸ್ತಫಾ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳ ಚಿಕಿತ್ಸಾ ತಜ್ಞ ಶಂಶಾದ್ ಅಹ್ಮದ್ ಖಾನ್ ಮುಂಜಿ ಕಾರ್ಯವನ್ನು ನಡೆಸಿಕೊಟ್ಟರು. ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ಹಾಗೂ ಹಳೆಕೋಟೆ ಮಸೀದಿಯ ಅಧ್ಯಕ್ಷ ಹಾಜಿ ತ್ವಾಹಾ ಅಧ್ಯಕ್ಷತೆ ವಹಿಸಿದ್ದರು. ಹಳೆಕೋಟೆ ಮಸೀದಿಯ ಖತೀಬ್ ಉಸ್ಮಾನ್ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಯಾಗಿ ಕೆ.ಎಂ.ಕೆ. ಮಂಜನಾಡಿ, ಹಾಜಿ ಝೈನುದ್ದೀನ್, ಮುಹಮ್ಮದ್ ಮೇಸ್ತ್ರಿ, ಅಬ್ದುರ್ರವೂಫ್, ಮುಹಮ್ಮದ್, ಯು.ಎಂ. ಅಲ್ತಾಫ್, ಯು.ಎಚ್, ಇಬ್ರಾಹಿಂ ಎಂ.ಎಚ್, ಫಾರೂಕ್ ಯು.ಎಚ್., ಆದಂ ಮುಸ್ಲಿಯಾರ್ , ಶಬೀರ್ ಹಸನ್, ಅಬ್ದುಲ್ ಕರೀಮ್, ಅಬ್ದುಲ್ ಲತೀಫ್, ಕಬೀರ್, ಇಮ್ರಾನ್ ಯು.ಎನ್ ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಇಲ್ಯಾಸ್ ಹಾಜಬ್ಬ ಮತ್ತಿತರರು ಉಪಸ್ಥಿತರಿದ್ದರು. ಮುಹಮ್ಮದ್ ರಫೀಕ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಫೈರೋಝ್ ಸ್ವಾಗತಿಸಿದರು. ಅಬ್ದುಲ್ ಶಮೀರ್ ವಂದಿಸಿದರು.