ಸಿಪಿಐಎಂ ಮನೆಮನೆ ಪ್ರಚಾರ ಕಾರ್ಯಕ್ರಮ
ಬೈಂದೂರು, ಆ.30: ಕರೋನಾದಿಂದ ಸಂಕಷ್ಟಕ್ಕೊಳಗಾದವರಿಗೆ ಪರಿಹಾರ ಮತ್ತು ಪರ್ಯಾಯ ವ್ಯವಸ್ಥೆಗಾಗಿ ಸಿಪಿಐಎಂ ಮನೆ ಮನೆ ಪ್ರಚಾರ ಕಾರ್ಯ ಕ್ರಮವು ರವಿವಾರ ಉಪ್ಪುಂದ ಹಾಗೂ ಹೆಮ್ಮಾಡಿ ಕಟ್ಟಡ ಶಾಖೆಯ ನೇತೃತ್ವದಲ್ಲಿ ನಡೆಯಿತು.
ಆರು ತಿಂಗಳ ವರೆಗೆ ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ಮಾಸಿಕ 7500ರೂ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಿ ಕೂಲಿ ಹೆಚ್ಚಳ ಮಾಡ ಬೇಕು ಸೇರಿದಂತೆ ಒಟ್ಟು 16 ಬೇಡಿಕೆಗಳಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉಪ್ಪುಂದದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ, ಶಾಖಾ ಕಾರ್ಯದರ್ಶಿ ಚಂದ್ರ, ಮಾಧವ ದೇವಾಡಿಗ, ಉದಯ ಗಾಣಿಗ, ಅಮ್ಮಯ್ಯ ಮತ್ತು ಹೆಮ್ಮಾಡಿಯಲ್ಲಿ ಬೈಂದೂರು ವಲಯ ಕಾರ್ಯ ದರ್ಶಿ ಸುರೇಶ್ ಕಲ್ಲಾಗರ, ವಲಯ ಸಮಿತಿ ಸದಸ್ಯ ಸಂತೋಷ ಹೆಮ್ಮಾಡಿ, ಶಾಖಾ ಕಾರ್ಯದರ್ಶಿ ಜಗದೀಶ ಆಚಾರ್, ನರಸಿಂಹ, ಶ್ರೀಧರ ಗಾಣಿಗ ಮೊದಲಾದವರು ಉಪಸ್ಥಿತರಿದ್ದು.
Next Story