ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ ನಾಪತ್ತೆ
ಬ್ರಹ್ಮಾವರ, ಆ.30: ಸಾಲ್ಮರದಲ್ಲಿರುವ ತಾಯಿ ಮನೆಗೆ ಹಾಗೂ ಸಂತೆಕಟ್ಟೆಯ ವೈದ್ಯರ ಬಳಿ ಹೋಗಿ ಬರುವುದಾಗಿ ಹೇಳಿ ಆ.29ರಂದು ಬೆಳಗ್ಗೆ ಮನೆಯಿಂದ ಹೋದ ಉಪ್ಪೂರು ಗ್ರಾಮದ ನರ್ನಾಡು ಮದಗ ಬಳಿ ನಿವಾಸಿ ರವೀಂದ್ರ(48) ಎಂಬವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಇವರು ಮಧ್ಯಾಹ್ನ ವೇಳೆ ಉಪ್ಪೂರು ಗ್ರಾಮದ ಕೆ.ಜಿ.ರೋಡ್ ಸೇತುವೆ ಯಿಂದ ಕೆಳಗೆ ಹಾರಿರುವುದಾಗಿ ಕೆಲವರು ನೋಡಿ ತಿಳಿಸಿದ್ದು, ಅದರಂತೆ ಸ್ಥಳದಲ್ಲಿ ನೋಡಿದಾಗ ರವೀಂದ್ರ ಅವರ ಮೊಬೈಲ್ ಹಾಗೂ ಇತರ ವಸ್ತುಗಳು ದೊರೆತಿದೆ. ನಂತರ ಪೊಲೀಸ್ ಇಲಾಖೆಯವರು ಅಗ್ನಿ ಶಾಮಕದಳದವರ ಜೊತೆ ಕೆ.ಜಿ.ರೋಡ್ ಸ್ವರ್ಣ ನದಿಯಲ್ಲಿ ಹುಡುಕಾಡಿದ್ದು, ರವೀಂದ್ರ ಈವರೆಗೆ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story