Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕೊರೋನ ಗೆದ್ದು ಬಂದು ಗುಡಾರದಲ್ಲಿ...

ಕೊರೋನ ಗೆದ್ದು ಬಂದು ಗುಡಾರದಲ್ಲಿ ಮಲಗಿರುವ ಕೆರೆ ಕಾಮೇಗೌಡ

ಆಸ್ಪತ್ರೆಯಿಂದ ಗ್ರಾಮಕ್ಕೆ ಮರಳಿ ತಿಂಗಳಾದರೂ ಏಕಾಂತ ವಾಸ

ಕುಂಟನಹಳ್ಳಿ ಮಲ್ಲೇಶಕುಂಟನಹಳ್ಳಿ ಮಲ್ಲೇಶ30 Aug 2020 9:57 PM IST
share
ಕೊರೋನ ಗೆದ್ದು ಬಂದು ಗುಡಾರದಲ್ಲಿ ಮಲಗಿರುವ ಕೆರೆ ಕಾಮೇಗೌಡ

ಮಂಡ್ಯ, ಆ.30: ಕೊರೋನ ಗೆದ್ದು ಬಂದ ಮಳವಳ್ಳಿ ತಾಲೂಕು ದಾಸನದೊಡ್ಡಿಯ ಕೆರೆ ಕಾಮೇಗೌಡ, ತನ್ನಿಂದ ಇತರರಿಗೆ ತೊಂದರೆಯಾಗಬಾರದೆಂದು ಏಕಾಂತವಾಸ ಅನುಭವಿಸುತ್ತಾ ‘ಅನಾಥ’ನಂತೆ ಬಿದ್ದಿದ್ದಾರೆ. ಕೋವಿಡ್ ಜಿಲ್ಲಾಸ್ಪತ್ರೆಯಿಂದ ಕೊರೋನದಿಂದ ಗುಣಮುಖರಾಗಿ ಬಿಡುಗಡೆಯಾಗಿ ಗ್ರಾಮಕ್ಕೆ ಮರಳಿದ ಸುಮಾರು ಒಂದು ತಿಂಗಳಿಂದಲೂ ಕಾಮೇಗೌಡರು ತನ್ನ ಮನೆಯ ಹಿತ್ತಲಿನಲ್ಲಿ ಗುಡಾರ ಕಟ್ಟಿಕೊಂಡು ಮಲಗಿಬಿಟ್ಟಿದ್ದಾರೆ.

ಮಕ್ಕಳು, ಮೊಮ್ಮಕ್ಕಳ ತುಂಬು ಕುಟುಂಬದ ಕಾಮೇಗೌಡರು, ಮನೆಯ ಹಿತ್ತಲಿನಲ್ಲಿ ಗುಡಾರ ಹಾಕಿಕೊಂಡು ಅನಾಥನಂತೆ ಮಲಗಿರುವುದು ನೋಡಿದವರಿಗೆ ಆಶ್ವರ್ಯ ಹುಟ್ಟಿಸುತ್ತಿದೆ. ಕುರಿಗಾಹಿ ಕಾಮೇಗೌಡರು ನಿರ್ಮಿಸಿದ ಕಟ್ಟೆಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಕುಂದನಬೆಟ್ಟ ಹಸಿರು ಹೊದ್ದು ಮಲಗಿದೆ. ಅದರ ಸೊಬಗು ಸವಿಯುತ್ತಿದ್ದ ಕಾಮೇಗೌಡರು ಗುಡಾರದೊಳಗೆ ಮುಸುಕೆಳೆದುಕೊಂಡು ಮಲಗಿಬಿಟ್ಟಿದ್ದಾರೆ.

ಬರಡುಗಾಡಿನ ತನ್ನ ಗ್ರಾಮದ ಬಳಿ ಇರುವ ಕುಂದನಬೆಟ್ಟದಲ್ಲಿ ಕುರಿಕಾಯ್ದುಕೊಂಡು ಸುಮಾರು 13 ಕಟ್ಟೆಗಳನ್ನು ನಿರ್ಮಿಸಿ ಗಮನ ಸೆಳೆದಿದ್ದ ಕಾಮೇಗೌಡರ ಸಾಧನೆ, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸಿಸಲ್ಪಟ್ಟ ಮೇಲೆ ದೇಶದ ಮೂಲೆಮೂಲೆಗೂ ಹಬ್ಬಿತು. ಜಿಲ್ಲಾಡಳಿತ ಕಾಮೇಗೌಡರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿತು. 

ಈಗಾಗಲೇ ಮುರಘಮಠದ ಬಸವಶ್ರೀ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಕಾಮಗೇಡರನ್ನು ಅರಸಿ ಬಂದಿದ್ದು, ಪ್ರಶಸ್ತಿಯ ಬಹುಪಾಲು ಹಣವನ್ನೂ ಕೆರೆಕಟ್ಟೆ ನಿರ್ಮಿಸಲು ಕಾಮೇಗೌಡರು ವಿನಿಯೋಗಿಸಿದರು.

ಇತ್ತೀಚಿಗೆ ಕಾಮೇಗೌಡರ ಕಾಲಿಗೆ ಗಾಯವಾಗಿ ಜಿಲ್ಲಾಡಳಿತ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿತು. ಮನೆಗೆ ಮರಳಿದ ನಂತರ, ಕೊರೋನ ಸೋಂಕು ಕಂಡುಬಂತು. ಕೊರೋನವನ್ನು ಕಾಮೇಗೌಡರು ಗೆದ್ದು ಮನೆಗೆ ಮರಳಿದರು. ಆದರೆ ಮನೆಗೆ ಮರಳಿದ ನಂತರ, ಮನೆಯ ಹಿತ್ತಲಲ್ಲಿ ಗುಡಾರ ಹಾಕಿಕೊಂಡು ವಾಸಿಸುತ್ತಿದ್ದಾರೆ. ಊಟ, ನೀರು ತಲುಪಿಸುವುದು ಬಿಟ್ಟರೆ, ಮನೆಯವರೂ ಅಲ್ಲಿಗೆ ಸುಳಿಯದಂತೆ ಕಾಮೇಗೌಡರು ಕಟ್ಟಾಜ್ಞೆ ವಿಧಿಸಿದ್ದಾರೆ. ಕಾಮೇಗೌಡ ಕೊರೋನ ಗೆದ್ದರೂ ಕಾಲಿನ ಗಾಯ ಬಾಧೆಯಿಂದ ಅವರು ಇನ್ನೂ ಮುಕ್ತಿ ಹೊಂದಿಲ್ಲ.

ಕೊರೋನ ಗೆದ್ದು ಬಂದಿದ್ದೇನೆ. ಆದರೂ ಮುನ್ನಚ್ಚರಿಕೆ ವಹಿಸಬೇಕು. ಮನೆಯಲ್ಲಿ ಚಿಕ್ಕಚಿಕ್ಕ ಮೊಮ್ಮಕ್ಕಳಿದ್ದಾರೆ. ಅವರ ಆರೋಗ್ಯ ಬಹಳ ಮುಖ್ಯ. ಹಾಗಾಗಿ ನಾನು ಹಿತ್ತಲಲ್ಲಿ ಪ್ರತ್ಯೇಕವಾಗಿ ಇದ್ದೇನೆ ಎಂದು ಕಾಮೇಗೌಡ ವಿವರಣೆ ಕೊಡುತ್ತಾರೆ. ಇಲ್ಲಿಯವರೆಗೂ ಕಾಳಜಿ ವಹಿಸಿದ್ದ ಜಿಲ್ಲಾಡಳಿತ ಇದನ್ನೂ ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಈ ಪ್ರಪಂಚದಲ್ಲಿ ಮನುಷ್ಯರಿಗೆ ಕೆರೆಕಟ್ಟೆ ಕಟ್ಟಿಸಿದವರನ್ನು ನೋಡಿದ್ದೇವೆ, ಆದರೆ, ಪ್ರಾಣಿ-ಪಕ್ಷಿಗಳಿಗೆ ಕಟ್ಟಿಸಿರುವುದನ್ನು ಕಂಡಿಲ್ಲ. ಹಾಗಾಗಿ ಪ್ರಾಣಿಪಕ್ಷಿಗಳ ದಾಹ ತಣಿಸಲು ಬೆಟ್ಟದಲ್ಲಿ ಸಣ್ಣಸಣ್ಣ ಕೆರೆಗಳನ್ನು ನಿರ್ಮಿಸಿದ್ದೇನೆಯೇ ಹೊರತು ಪ್ರಶಸ್ತಿ ಪುರಸ್ಕಾರಗಳಿಗಲ್ಲ. ನನ್ನ ಕಾಯಕದ ಬಗ್ಗೆ ಅನುಮಾನಿಸುವವರಿಗೆ ಕೆರೆಗಳಿರುವ ಕುಂದನಬೆಟ್ಟವೇ ಸಾಕ್ಷಿ.
-ಕೆರೆ ಕಾಮೇಗೌಡ

“ಸಮಾಜಕ್ಕೆ ಮಾದರಿಯಾಗಿರುವ ಕಾಮೇಗೌಡರು, ಹಿತ್ತಲಲ್ಲಿ ಏಕಾಂಗಿಯಾಗಿರುವುದು ನೋಡಿ ತುಂಬಾ ನೋವಾಯಿತು. ಕಾಲಿನ ಗಾಯದಿಂದ ನರಳುತ್ತಿದ್ದರೂ ಅವರಲ್ಲಿರುವ ಅದಮ್ಯ ಚೇತನ ಸ್ಫೂರ್ತಿದಾಯಕವಾಗಿದೆ. ತಮ್ಮ ಏಕಾಂತವಾಸಕ್ಕೆ ಕಾಮೇಗೌಡರು ಸಮರ್ಥನೆ ನೀಡಿದರು. ಆದರೂ, ಕಾಮೇಗೌಡರ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಾಗಿದೆ.
-ಮಹೇಂದ್ರ, ಅಧ್ಯಕ್ಷರು, ಚಾಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ

share
ಕುಂಟನಹಳ್ಳಿ ಮಲ್ಲೇಶ
ಕುಂಟನಹಳ್ಳಿ ಮಲ್ಲೇಶ
Next Story
X