ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು, ಆ.30: ಗ್ರಾಮೀಣ ಪುನರ್ವಸತಿ ಯೋಜನೆಯಡಿ ವಿಟ್ಲದ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಪೆರ್ನೆ, ಇಡ್ಕಿದು, ಅನಂತಾಡಿ, ಮಂಚಿ, ಇರಾ, ಕೆದಿಲ, ಪೆರುವಾಯಿ, ಸಾಲೆತ್ತೂರು, ಬರಿಮಾರು, ಕರೋಪಾಡಿ, ಕಡೇಶ್ವಾಲ್ಯ ಗ್ರಾಪಂನಲ್ಲಿ ಖಾಲಿಯಿರುವ ಗ್ರಾಪಂ ಮಟ್ಟದ ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಈ ಗ್ರಾಪಂ ವ್ಯಾಪ್ತಿಯಲ್ಲಿ ಅರ್ಹ ವಿಕಲಚೇತನ ಅಭ್ಯರ್ಥಿಗಳು ಇದ್ದಲ್ಲಿ ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ವಿಟ್ಲ, ರಿಹಾ ಪ್ಲಾನೆಟ್ ಚಂದ್ರನಾಥ ಬಸದಿ ಎದುರು, ವಿಟ್ಲ, ಬಂಟ್ವಾಳ ತಾಲೂಕು ಇಲ್ಲಿಗೆ ಸಲ್ಲಿಸಬೇಕು. ಮಾಹಿತಿಗೆ ದೂ.ಸಂ: 08255 238080ನ್ನು ಸಂಪರ್ಕಿಸಬಹುದು.ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿರುತ್ತದೆ.
ಈ ಹುದ್ದೆಯ ಅಭ್ಯರ್ಥಿಗಳು ಸ್ಥಳೀಯ ಗ್ರಾಪಂ ವ್ಯಾಪ್ತಿಯ ನಿವಾಸಿಯಾಗಿರಬೇಕು. ಅಂಗವಿಕಲತೆಯ ಪ್ರಮಾಣ ಶೇ.40ರಷ್ಟಿರಬೇಕು. 18ರಿಂದ 45 ವರ್ಷದ ಆರೋಗ್ಯವಂತರಾಗಿರಬೇಕು. ಎಸೆಸೆಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರಬೇಕು. ನಿಗದಿತ ನಮೂನೆಯ ಅರ್ಜಿ, ವಿಕಲಚೇತನ ಅಭ್ಯರ್ಥಿಯ ಭಾವಚಿತ್ರ, ವಿಕಲಚೇತನರ ಗುರುತಿನ ಕಾರ್ಡಿನ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್, ಎಸೆಸೆಲ್ಸಿ ಅಂಕಪಟ್ಟಿಯ ಜೆರಾಕ್ಸ್ ಪ್ರತಿ, ರೇಶನ್ ಕಾರ್ಡಿನ ಜೆರಾಕ್ಸ್ ಪ್ರತಿ, ವಾಸ್ತವ್ಯದ ಬಗ್ಗೆ ಗ್ರಾಪಂನಿಂದ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟನೆ ತಿಳಸಿದೆ.