Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಫೇಸ್ ಬುಕ್ ಆಂತರಿಕ ಗ್ರೂಪ್ ನಲ್ಲಿ...

ಫೇಸ್ ಬುಕ್ ಆಂತರಿಕ ಗ್ರೂಪ್ ನಲ್ಲಿ ಮೋದಿಯನ್ನು ಹೊಗಳಿ, ಬಿಜೆಪಿ ಗೆಲುವಿಗೆ ಸಂಭ್ರಮಿಸಿ ಪೋಸ್ಟ್ ಹಾಕಿದ್ದ ಅಂಖಿ ದಾಸ್

Wall Street Journal ವರದಿ

ವಾರ್ತಾಭಾರತಿವಾರ್ತಾಭಾರತಿ31 Aug 2020 2:10 PM IST
share
ಫೇಸ್ ಬುಕ್ ಆಂತರಿಕ ಗ್ರೂಪ್ ನಲ್ಲಿ ಮೋದಿಯನ್ನು ಹೊಗಳಿ, ಬಿಜೆಪಿ ಗೆಲುವಿಗೆ ಸಂಭ್ರಮಿಸಿ ಪೋಸ್ಟ್ ಹಾಕಿದ್ದ ಅಂಖಿ ದಾಸ್

ಹೊಸದಿಲ್ಲಿ: ಫೇಸ್ ಬುಕ್ ಬಿಜೆಪಿ ಪರ ನಿಲುವು ತಳೆದಿದೆ ಹಾಗೂ ಬಿಜೆಪಿ ನಾಯಕರ ದ್ವೇಷಯುಕ್ತ ಪೋಸ್ಟ್ ‍ಗಳ ವಿರುದ್ಧ ತನ್ನ ನೀತಿಯಂತೆ ಕ್ರಮ ಕೈಗೊಂಡಿಲ್ಲ ಎಂದು Wall Street Journal  ಕೆಲ ದಿನಗಳ ಹಿಂದೆ ಪ್ರಕಟಿಸಿದ ಸುದ್ದಿಯಿಂದ ಸಾಕಷ್ಟು ಟೀಕೆಗಳನ್ನು ಈಗಾಗಲೇ ಎದುರಿಸಿರುವ ಫೇಸ್ ಬುಕ್ ಇಂಡಿಯಾದ ಪಬ್ಲಿಕ್ ಪಾಲಿಸಿ ಎಕ್ಸಿಕ್ಯೂಟಿವ್ ಅಂಖಿ ದಾಸ್ ಇದೀಗ ಅಂತಹುದೇ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.

'ವಾಲ್ ಸ್ಟ್ರೀಟ್ ಜರ್ನಲ್' ಆಗಸ್ಟ್ 30ರ ತನ್ನ ಲೇಖನದಲ್ಲಿ ಆಕೆಯ ಕುರಿತು ಮತ್ತಷ್ಟು ಮಾಹಿತಿ ಹೊರಗೆಡಹಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿ ಗೆಲುವು ಸಾಧಿಸುವ ಮುನ್ನಾ ದಿನ  ಭಾರತದಲ್ಲಿ ಫೇಸ್ ಬುಕ್ ಉದ್ಯೋಗಿಗಳಿಗಿರುವ ಆಂತರಿಕ ಗ್ರೂಪ್ ನಲ್ಲಿ ಅಂಖಿ ದಾಸ್, “ಅವರ ಸೋಶಿಯಲ್ ಮೀಡಿಯಾ ಅಭಿಯಾನ ನಾವು ಆರಂಭಿಸಿದೆವು ಹಾಗೂ ಉಳಿದದ್ದೆಲ್ಲವೂ ಇತಿಹಾಸ” ಎಂದು ಪೋಸ್ಟ್ ಮಾಡಿದ್ದರೆಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಹೇಳಿದೆ.

ಅಷ್ಟೇ ಅಲ್ಲದೆ ಪ್ರತಿ ಬಾರಿ ಬಿಜೆಪಿ, ಮುಖ್ಯವಾಗಿ ಮೋದಿ ಚುನಾವಣೆಯಲ್ಲಿ ಲಾಭ ಸಾಧಿಸಿದಾಗಲೆಲ್ಲಾ ಆಕೆ ಇಂತಹುದೇ ಪೋಸ್ಟ್ ಗಳನ್ನು ಮಾಡಿದ್ದಾರೆ. ಅಕ್ಟೋಬರ್ 2012ರಲ್ಲಿ ಮೋದಿಯ ಬಿಜೆಪಿ ತಂಡದ ತರಬೇತಿ ಕಾರ್ಯಕ್ರಮದ ಕುರಿತಂತೆ “ಸಕ್ಸಸ್ ಇನ್ ಅವರ್ ಗುಜರಾತ್ ಕ್ಯಾಂಪೇನ್” ಎಂದು ಆಕೆ ಬರೆದಿದ್ದರು.

ಅಂಖಿ ದಾಸ್ ಅವರು ಮೋದಿಯನ್ನು ‘ಭಾರತದ ಜಾರ್ಜ್ ಡಬ್ಲ್ಯು ಬುಷ್’ ಎಂದು ಬಣ್ಣಿಸಿದ್ದರು ಎಂದು ಆಕೆಯ ಫೇಸ್ ಬುಕ್ ಸಹೋದ್ಯೋಗಿ ಹಾಗೂ ಫೇಸ್ ಬುಕ್ ನ ಉನ್ನತ ಅಧಿಕಾರಿ ಕ್ಯಾಟಿ ಹರ್ಬತ್ ಹೇಳಿದ್ದರು ಎಂದು ಲೇಖನದಲ್ಲಿ  ತಿಳಿಸಲಾಗಿದೆ.

ದೇಶದ ಮೇಲೆ ಕಾಂಗ್ರೆಸ್ ಹಿಡಿತವನ್ನು ಅಂತ್ಯಗೊಳಿಸಿದ `ಬಲಾಢ್ಯ' ಎಂದು ಮೋದಿಯನ್ನು ದಾಸ್ ಹೊಗಳಿರುವ ಕುರಿತು ಇತರ ಪೋಸ್ಟ್ ಗಳಿವೆಯೆನ್ನಲಾಗಿದೆ. ಫೇಸ್ ಬುಕ್‍ನ ಆದ್ಯತೆಗಳನ್ನು ಬಿಜೆಪಿಯ ಚುನಾವಣಾ ಅಭಿಯಾನದ ಭಾಗವನ್ನಾಗಿಸಲು ಫೇಸ್ ಬುಕ್ ಬಿಜೆಪಿ ಜತೆ ಲಾಬಿ ನಡೆಸಿತ್ತು ಎಂದು 2014ಗಿಂತ ಮುನ್ನ ಅಂಖಿ ದಾಸ್ ಬರೆದಿದ್ದರೆನ್ನಲಾಗಿದೆ. “ಈಗ ಅವರು ಸುಮ್ಮನೆ ಹೋಗಿ ಚುನಾವಣೆ ಗೆಲ್ಲಬೇಕಿದೆ,'' ಎಂದೂ ಅವರು ಆಂತರಿಕ ಗ್ರೂಪ್‍ ನಲ್ಲಿ ಪೋಸ್ಟ್ ಮಾಡಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್‍ ನ ಹೊಸ ಲೇಖನದಲ್ಲಿ ತಿಳಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X