Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಸ್ಸಾಮಿನ ಈ ಗ್ರಾಮದ ಬಂಗಾಳಿ ಹಿಂದೂಗಳ...

ಅಸ್ಸಾಮಿನ ಈ ಗ್ರಾಮದ ಬಂಗಾಳಿ ಹಿಂದೂಗಳ ನಿದ್ರೆಗೆಡಿಸಿದೆ ಎನ್‌ಆರ್‌ಸಿ

ಭಾರತದಲ್ಲಿ ನೆಲೆಸಿದ್ದರೂ ಆಸ್ತಿ ಖರೀದಿಸುವಂತಿಲ್ಲ, ನೌಕರಿಯ ಭಾಗ್ಯವೂ ಇಲ್ಲ

ವಾರ್ತಾಭಾರತಿವಾರ್ತಾಭಾರತಿ31 Aug 2020 7:30 PM IST
share
ಅಸ್ಸಾಮಿನ ಈ ಗ್ರಾಮದ ಬಂಗಾಳಿ ಹಿಂದೂಗಳ ನಿದ್ರೆಗೆಡಿಸಿದೆ ಎನ್‌ಆರ್‌ಸಿ

ಹೊಸದಿಲ್ಲಿ,ಆ.31: ಅಸ್ಸಾಮಿನಲ್ಲಿ ಎನ್‌ಆರ್‌ಸಿ ಪಟ್ಟಿ ಪ್ರಕಟಗೊಂಡಾಗಿನಿಂದ ನಾಗಾಂವ್ ಜಿಲ್ಲೆಯ ಭರಿ ಧುವಾ ಗ್ರಾಮದಲ್ಲಿ ವಾಸವಿರುವ ಬಂಗಾಳಿ ಭಾಷಿಕ ಹಿಂದೂಗಳ ಬದುಕು ದುರ್ಭರವಾಗಿದೆ. ಈ ಗ್ರಾಮದ ಜನಸಂಖ್ಯೆ ಸುಮಾರು 5,000ದಷ್ಟಿದ್ದು,ಹೆಚ್ಚಿನ ಜನರು ಬಂಗಾಳಿ ಮಾತನಾಡುವ ಹಿಂದುಗಳಾಗಿದ್ದಾರೆ. ಇಲ್ಲಿಯ ಶೇ.70ಕ್ಕೂ ಅಧಿಕ ಜನರು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿದ್ದಾರೆ. ಇದು ಅವರನ್ನು ಆಸ್ತಿ ಖರೀದಿ ಮತ್ತು ಸರಕಾರಿ ಉದ್ಯೋಗಗಳಿಂದ ವಂಚಿತರನ್ನಾಗಿಸಿದೆ. ಯಾವಾಗ ಬಂಧನ ಕೇಂದ್ರವನ್ನು ಸೇರಬೇಕಾದೀತೋ ಎಂಬ ಭಯದಲ್ಲಿಯೇ ಈ ಗ್ರಾಮದ ಜನರು ಬದುಕುತ್ತಿದ್ದಾರೆ.

ಗ್ರಾಮದ ನಿವಾಸಿ,ವೃತ್ತಿಯಲ್ಲಿ ಬಡಗಿಯಾಗಿರುವ ಆರಾ ಕುಮಾರ ಬಿಸ್ವಾಸ್ ಕಳೆದ ಜನವರಿಯಲ್ಲಿ ತನ್ನ ಉಳಿತಾಯದ ಹಣದೊಂದಿಗೆ ಸಾಲವಾಗಿ ಪಡೆದಿದ್ದ ಮೊತ್ತವನ್ನು ಸೇರಿಸಿ ಮೂರು ಲಕ್ಷ ರೂ.ಗಳಿಗೆ ಕಾಲು ಎಕರೆ ಭೂಮಿಯನ್ನು ಖರೀದಿಸಿದ್ದ. ಎರಡು ದಿನಗಳ ಬಳಿಕ ಭೂಮಿಯನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ನೋಂದಣಾಧಿಕಾರಿಗಳ ಕಚೇರಿಗೆ ತೆರಳಿದಾಗ ಆತನಿಗೆ ಆಘಾತ ಕಾದಿತ್ತು. ಹಲವಾರು ದಾಖಲೆಗಳನ್ನೂ ಸಲ್ಲಿಸಿದ್ದರೂ ಆತ ತಾನು ಭಾರತೀಯ ಎನ್ನುವುದನ್ನು ಸಾಬೀತು ಮಾಡಬೇಕಿತ್ತು. ಇದಕ್ಕಾಗಿ ಆತ ತನ್ನ ಹೆಸರು ಇರುವ ಎನ್‌ಆರ್‌ಸಿಯ ಕಂಪ್ಯೂಟರ್ ಪ್ರತಿಯನ್ನು ಸಲ್ಲಿಸಿಬೇಕಿತ್ತು. ಆದರೆ ಆತನ ಹೆಸರು ಎನ್‌ಆರ್‌ಸಿಯಲ್ಲಿ ಸೇರ್ಪಡೆಗೊಂಡಿಲ್ಲ.

ಎನ್‌ಆರ್‌ಸಿ ನಿಯಮದಂತೆ 1971,ಮಾ.24ರ ನಂತರ ಅಸ್ಸಾಮಿಗೆ ವಲಸೆ ಬಂದವರನ್ನು ವಿದೇಶಿಯರು ಎಂದು ಪರಿಗಣಿಸಲಾಗುತ್ತದೆ. ಆರಾ ಕುಮಾರನ ತಂದೆ ಅಮೂಲ್ಯ ಬಿಸ್ವಾಸ್ ಹೆಸರು 1971ರ ಮತದಾರರ ಪಟ್ಟಿಯಲ್ಲಿದ್ದರೂ ಅವರೂ ಎನ್‌ಆರ್‌ಸಿಯಿಂದ ಹೊರಗುಳಿದಿದ್ದಾರೆ. ಎನ್‌ಆರ್‌ಸಿಯಲ್ಲಿ ಹೆಸರಿಲ್ಲದಿದ್ದರೆ ಭೂಮಿಯನ್ನು ನೋಂದಾಯಿಸುವುದಿಲ್ಲ ಎಂದು ಅಧಿಕಾರಿಗಳು ಆರಾ ಕುಮಾರ್‌ಗೆ ತಿಳಿಸಿದ್ದಾರೆ. ಇದು ಆರಾ ಕುಮಾರ ಒಬ್ಬನದೇ ಕಥೆಯಲ್ಲ, ಗ್ರಾಮದ ಹಲವಾರು ಜನರ ಆಸ್ತಿಗಳು ಇನ್ನೂ ನೋಂದಣಿಯಾಗಿಲ್ಲ. ಎನ್‌ಆರ್‌ಸಿಯಿಂದ ಹೆಸರು ಹೊರಗಿರುವುದು ಇದಕ್ಕೆ ಕಾರಣ. ಎನ್‌ಆರ್‌ಸಿಯಲ್ಲಿ ಹೆಸರು ಸೇರಿಸುವಂತೆ ಅವರು ಸಲ್ಲಿಸಿರುವ ಅರ್ಜಿಗಳು ವಿದೇಶಿಯರ ನ್ಯಾಯಾಧಿಕರಣಗಳಲ್ಲಿವೆ. ಈ ನ್ಯಾಯಾಧಿಕರಣಗಳಿಗೆ ಎಷ್ಟು ದಾಖಲೆಗಳನ್ನು ಸಲ್ಲಿಸಿದರೂ ಸಾಲದು. ಹೀಗಾಗಿ ಯಾವಾಗ ಈ ನ್ಯಾಯಾಧಿಕರಣಗಳು ತಮ್ಮನ್ನು ವಿದೇಶಿಯರೆಂದು ಘೋಷಿಸಿ ಬಂಧನ ಕೇದ್ರಗಳಿಗೆ ತಳ್ಳುತ್ತವೆಯೋ ಎಂಬ ಆತಂಕದಲ್ಲಿ ಭರಿ ಧುವಾ ಗ್ರಾಮಸ್ಥರಿಗೆ ನಿದ್ರೆಯೂ ಬರುತ್ತಿಲ್ಲ.

ಎನ್‌ಆರ್‌ಸಿಯಿಂದ ಹೊರಗುಳಿದಿರುವುದು ಅಸ್ಸಾಂ ನಿವಾಸಿಗಳ ಹಕ್ಕುಗಳ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ನ್ಯಾಯಾಧಿಕರಣಗಳು ವಿದೇಶಿಯ ಎಂದು ಘೋಷಿಸುವವರೆಗೆ ಎನ್‌ಆರ್‌ಸಿಯಲ್ಲಿ ಸೇರ್ಪಡೆಗೊಂಡಿಲ್ಲ ಎಂಬ ಮಾತ್ರಕ್ಕೆ ಭಾರತೀಯ ಪ್ರಜೆಯಲ್ಲ ಎಂದು ಅರ್ಥವಲ್ಲ ಎಂದು ಭಾರತ ಸರಕಾರವು ಸ್ಪಷ್ಟನೆ ನೀಡಿದ್ದರೂ ಈ ಗ್ರಾಮಸ್ಥರ ಗೋಳು ಮುಂದುವರಿದಿದೆ ಮತ್ತು ಅವರ ಗೋಳನ್ನು ಕೇಳುವವರೂ ಯಾರೂಇಲ್ಲ.

ತಮ್ಮನ್ನು ತಪ್ಪಾಗಿ ಎನ್‌ಆರ್‌ಸಿಯಿಂದ ಹೊರಗುಳಿಸಲಾಗಿದೆ ಮತ್ತು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಕಷ್ಟು ದಾಖಲೆಗಳು ತಮ್ಮ ಬಳಿಯಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಕೆಲವು ಕುಟುಂಬಗಳು 50ರ ದಶಕದಲ್ಲಿಯೇ ಬಾಂಗ್ಲಾದಲ್ಲಿ ಕಿರುಕುಳ ತಾಳಲಾರದೇ ಭಾರತಕ್ಕೆ ನಿರಾಶ್ರಿತರಾಗಿ ಬಂದು ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ಕುಟುಂಬದಲ್ಲಿಯ ಕೆಲವರ ಹೆಸರುಗಳು ಎನ್‌ಆರ್‌ಸಿಯಲ್ಲಿದ್ದರೆ ಇತರರ ಹೆಸರುಗಳು ಪಟ್ಟಿಯಿಂದ ಬಿಟ್ಟುಹೋಗಿವೆ. ಎನ್‌ಆರ್‌ಸಿ ಪಟ್ಟಿಯಿಂದ ಹೊರಗಿರುವ ಈ ಬಂಗಾಳಿ ಭಾಷಿಕ ಹಿಂದುಗಳು ಅದರಿಂದಾಗಿ ಅವಮಾನವನ್ನು ಎದುರಿಸುವಂತಾಗಿದೆ. ಗ್ರಾಮದಲ್ಲಿ ಜನರ ನಡುವೆ ಜಗಳ ನಡೆದಾಗ ಒಬ್ಬ ತನ್ನ ಬೈಗುಳ ಬತ್ತಳಿಕೆ ಖಾಲಿಯಾದಾಗ ಎದುರಾಳಿಯ ಬಾಯಿಯನ್ನು ಮುಚ್ಚಿಸಲು ’ನಿನ್ನ ಹೆಸರು ಎನ್‌ಆರ್‌ಸಿ ಪಟ್ಟಿಯಲ್ಲಿಲ್ಲ’ ಎಂದು ಜರಿದು ಅವಮಾನಿಸುವುದು ಮಾಮೂಲಾಗಿಬಿಟ್ಟಿದೆ.

ಕೃಪೆ: scroll.in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X