ದಾರುಲ್ ಮುಸ್ತಫಾ ನಚ್ಚಬೆಟ್ಟು ಉಳ್ಳಾಲ ಘಟಕದ ಸಭೆ
ಉಳ್ಳಾಲ, ಆ.31: ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ನಚ್ಚಬೆಟ್ಟು ಇದರ ಉಳ್ಳಾಲ ಘಟಕದ ಪ್ರಥಮ ಕಾರ್ಯಕಾರಿಣಿ ಸಭೆಯು ಉಳ್ಳಾಲ ಮೇಲಂಗಡಿ ತಾಜುಲ್ ಉಲಮಾ ಸುನ್ನೀ ಸೆಂಟರಿನಲ್ಲಿ ಇತ್ತೀಚೆಗೆ ನಡೆಯಿತು.
ಎಸ್ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಸಖಾಫಿ ಉಳ್ಳಾಲ ಕಾರ್ಯಕ್ರಮ ಉಧ್ಘಾಟಿಸಿದರು. ದಾರುಲ್ ಮುಸ್ತಫಾ ಉಳ್ಳಾಲ ಘಟಕದ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಉಳ್ಳಾಲ ಸಭೆಯ ಅಧ್ಯಕ್ಷತೆ ವಹಿಸಿದರು. ಎಸ್ಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ರೆನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಹಾಗೂ ಚಿಕ್ಕಮಗಳೂರು ಮಾಗುಂಡಿ ಖತೀಬ್ ಅಬೂ ಅನಸ್ ಉಳ್ಳಾಲ ಮಾತನಾಡಿದರು.
ದಾರುಲ್ ಮುಸ್ತಫಾ ಸಂಸ್ಥೆಯ ಸಂಸ್ಥಾಪಕ, ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಸಂಸ್ಥೆಯ ಮಾಹಿತಿ ವಿನಿಮಯ ಮಾಡಿದರು.
ಸಭೆಯಲ್ಲಿ ಉಳ್ಳಾಲ ಘಟಕದ ಕಾರ್ಯಾಧ್ಯಕ್ಷ ಇಸಾಕ್ ಪೇಟೆ, ಪ್ರಧಾನ ಕಾರ್ಯದರ್ಶಿ ಹೈದರ್ ಮುಕ್ಕಚ್ಚೇರಿ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಉಪಾಧ್ಯಕ್ಷ ಇಲ್ಯಾಸ್ ಕೈಕೋ, ಜೊತೆ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಮುಹಮ್ಮದ್ ಕೈಕೋ ಉಪಸ್ಥಿತರಿದ್ದರು.