ಡಾ. ಕಫೀಲ್ ಖಾನ್ ಬಿಡುಗಡೆ: ಯುನಿವೆಫ್ ಕರ್ನಾಟಕ ಸ್ವಾಗತ
ಮಂಗಳೂರು, ಸೆ.1: ಎನ್ಎಸ್ಎ ಅಡಿ ಬಂಧಿತರಾಗಿದ್ದ ಉತ್ತರ ಪ್ರದೇಶದ ಡಾ. ಕಫೀಲ್ ಖಾನ್ರ ಬಿಡುಗಡೆಯನ್ನು ಯುನಿವೆಫ್ ಕರ್ನಾಟಕ ಸ್ವಾಗತಿಸಿದೆ.
ಅಲೀಗಢ ಮುಸ್ಲಿಮ್ ವಿವಿಯಲ್ಲಿ ಮಾಡಿದ ಭಾಷಣಕ್ಕಾಗಿ ಮತ್ತು ಸೌಹಾರ್ದ ಹದಗೆಡುವ ಹಾಗೂ ಕ್ಯಾಂಪಸ್ನ ವಾತಾವರಣ ಹಾಳುಮಾಡಿದ ಆರೋಪ ಹೊರಿಸಿ ಡಾ.ಕಫೀಲ್ ಖಾನ್ರನ್ನು ಕಠಿಣ ರಾಷ್ಟ್ರೀಯ ಭದ್ರತೆ ಕಾಯ್ದೆಯನ್ನು (ಎನ್ಎಸ್ಎ) ಅವರ ಮೇಲೆ ಹಾಕಿ ಕಳೆದ ಜನವರಿಯಲ್ಲಿ ಅವರನ್ನು ಬಂಧಿಸಲಾಗಿತ್ತು ಮತ್ತು ಅಲೀಗಢ ಜೈಲಲ್ಲಿ ಇಡಲಾಗಿತ್ತು.
ಈಗ ಅಲಹಾಬಾದ್ ಹೈಕೋರ್ಟ್ ಅವರ ಮೇಲೆ ಹಾಕಲಾಗಿರುವ ಪ್ರಕರಣ ಕಾನೂನುಬಾಹಿರ ಮತ್ತು ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ತೀರ್ಪು ನೀಡಿರುವುದು ನ್ಯಾಯದ ಘನತೆಯನ್ನು ಅದು ಎತ್ತಿ ಹಿಡಿದಿದೆ ಎಂದು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story