ಪಾಂಡವರಕಲ್ಲು: ಎಸ್ ಡಿಪಿಐಯಿಂದ ಆಯುಷ್ಮಾನ್ ಕಾರ್ಡ್ ಉಚಿತ ನೋಂದಣಿ ಕಾರ್ಯಕ್ರಮ
ಬಂಟ್ವಾಳ, ಸೆ.2: ಎಸ್ ಡಿಪಿಐ ಪಾಂಡವರಕಲ್ಲು ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ಕಾರ್ಯಕ್ರಮವು ಪಾಂಡವರಕಲ್ಲು ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಯೂಸುಫ್ ಆಲಡ್ಕ ವಹಿಸಿದ್ದರು. ಬಂಟ್ವಾಳ ಪುರಸಭೆಯ ಸದಸ್ಯರಾದ ಮೂನಿಶ್ ಅಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
ಪಿಎಫ್ಐ ಪುಂಜಾಲಕಟ್ಟೆ ವಲಯಾಧ್ಯಕ್ಷ ಹನೀಫ್ ಪುಂಜಾಲಕಟ್ಟೆ, ಪಾಂಡವರಕಲ್ಲು ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಅಬೂಬಕರ್ ಕೆದಿಲೆ, ಗೌರವಾಧ್ಯಕ್ಷ ಪುತ್ತುಮೋನು ಕುದುರು, ಮಾಜಿ ಅಧ್ಯಕ್ಷ ಹಕೀಂ ಕುದುರು, ಎನ್ಐಡಬ್ಲ್ಯುಎ ಸಮಿತಿ ಅಧ್ಯಕ್ಷ ಉಮರ್ ಕೆಪಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಾಕೂಬ್ ಉದ್ದದಗುಡ್ಡೆ, ಎಸ್ ಡಿಪಿಐ ಕಾವಳಮೂಡೂರು ವಲಯಾಧ್ಯಕ್ಷ ಅಬೂಬಕರ್ ಮದ್ದ, ಎಸ್ಸೆಸ್ಸೆಫ್ ಮಡಂತ್ಯಾರು ಸೆಕ್ಟರ್ ಕಾರ್ಯದರ್ಶಿ ಶಂಸುದ್ದೀನ್ ಮುಂತಾದವರು ಉಪಸ್ಥಿತರಿದ್ದರು.
ಎಸ್.ಡಿಪಿಐ ಬಡಗ ಕಜೆಕಾರು ಗ್ರಾಮ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಪಂಚಾಯತ್ ಸದಸ್ಯ ಅಥಾವುಲ್ಲ ಕೆದಿಲೆ ಸ್ವಾಗತಿಸಿದರು.
ಇಮ್ರಾನ್ ಪಾಂಡವರಕಲ್ಲು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
300ಕ್ಕೂ ಅಧಿಕ ಮಂದಿ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು.