‘ಪಿಎಂ ಕೇರ್ಸ್’ಗೆ 5 ದಿನಗಳಲ್ಲಿ 3,076 ಕೋಟಿ ರೂ. ನೀಡಿದವರ ಹೆಸರು ಬಹಿರಂಗಪಡಿಸಲು ಭಯವೇಕೆ?
ಚಿದಂಬರಂ ಪ್ರಶ್ನೆ
ಹೊಸದಿಲ್ಲಿ: ಕೋವಿಡ್ 19 ನಿಯಂತ್ರಣ ಕಾರ್ಯಕ್ಕೆ ನೆರವಾಗಲೆಂದು ರಚಿಸಲಾದ ‘ಪಿಎಂ ಕೇರ್ಸ್ ಫಂಡ್’ ಐದು ದಿನಗಳಲ್ಲಿ 3,076 ಕೋಟಿ ರೂ. ದೇಣಿಗೆ ಪಡೆದಿದೆ ಎಂದು ಸರಕಾರ ಬಹಿರಂಗಗೊಳಿಸಿರುವ ವರದಿ ತಿಳಿಸಿದೆ. ಆರ್ಥಿಕ ವರ್ಷ 2020ರ ಈ ಲೆಕ್ಕಪತ್ರದಲ್ಲಿ ಫಂಡ್ ಸ್ಥಾಪನೆಯಾದ ಮಾರ್ಚ್ 27ರಿಂದ ಮಾರ್ಚ್ 31ರ ತನಕದ ದೇಣಿಗೆಗಳನ್ನು ಮಾತ್ರ ಬಹಿರಂಗಗೊಳಿಸಲಾಗಿದೆ.
ಈ 3,076 ಕೋಟಿ ರೂ. ಪೈಕಿ ರೂ 3,075.85 ಕೋಟಿ ದೇಶೀಯ ಸ್ವಯಂಪ್ರೇರಿತ ದೇಣಿಗೆಯಾಗಿದ್ದರೆ 39.67 ಲಕ್ಷ ರೂ. ವಿದೇಶಿ ದೇಣಿಗೆಯಾಗಿದೆ. ಈ ಮಾಹಿತಿಯನ್ನು ‘ಪಿಎಂ ಕೇರ್ಸ್ ವೆಬ್ ಸೈಟ್’ ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಈ ಕುರಿತು ಟ್ವೀಟ್ ಮಾಡಿದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಈ ಉದಾರ ದಾನಿಗಳ ಹೆಸರುಗಳನ್ನೇಕೆ ಬಹಿರಂಗ ಪಡಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. “ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚು ದೇಣಿಗೆ ಪಡೆಯುವ ಪ್ರತಿಯೊಂದು ಎನ್ಜಿಒ ಹಾಗೂ ಟ್ರಸ್ಟ್ ತಮ್ಮ ದಾನಿಗಳ ಹೆಸರುಗಳನ್ನು ಕಡ್ಡಾಯವಾಗಿ ಬಹಿರಂಗ ಪಡಿಸಬೇಕಿದೆ. ಹಾಗಿರುವಾಗ ಪಿಎಂ ಕೇರ್ಸ್ ಫಂಡ್ಗೆ ಏಕೆ ಈ ವಿನಾಯಿತಿ?'' ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
“ದೇಣಿಗೆ ನೀಡಿದವರ್ಯಾರು ಎಂದು ಗೊತ್ತು. ದೇಣಿಗೆ ನೀಡಿದವರ ಟ್ರಸ್ಟಿಗಳ ಬಗ್ಗೆಯೂ ಗೊತ್ತು ಹಾಗಿರುವಾಗ ಟ್ರಸ್ಟಿಗಳು ದೇಣಿಗೆ ನೀಡಿದವರ ಹೆಸರುಗಳನ್ನೇಕೆ ಬಹಿರಂಗಪಡಿಸಲು ಹೆದರುತ್ತಿದ್ದಾರೆ?'' ಎಂದು ಚಿದಂಬರಂ ಕೇಳಿದ್ದಾರೆ.
The auditors of PM CARES FUND have confirmed that the Fund received Rs 3076 crore in just 5 days between March 26 and 31, 2020.
— P. Chidambaram (@PChidambaram_IN) September 2, 2020
But the names of these generous donors will not be revealed. Why?
— P. Chidambaram (@PChidambaram_IN) September 2, 2020
Every other NGO or Trust is obliged to reveal the names of donors contributing more than a threshold amount. Why is the PM CARES FUND exempt from this obligation?
The donee is known. The trustees of the donee are known. Why are the trustees afraid to reveal the names of the donors?
— P. Chidambaram (@PChidambaram_IN) September 2, 2020