ರಾಜ್ಯದಲ್ಲಿ 9,860 ಹೊಸ ಕೊರೋನ ಪ್ರಕರಣಗಳು ದೃಢ; 113 ಮಂದಿ ಸಾವು

ಬೆಂಗಳೂರು, ಸೆ.2: ರಾಜ್ಯದಲ್ಲಿ ಬುಧವಾರ 9,860 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 113 ಜನರು ಸೋಂಕಿಗೆ ಬಲಿಯಾಗಿದ್ದು, 6,287 ಜನರು ಗುಣಮುಖರಾಗಿದ್ದಾರೆ.
ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 3,61,341ಕ್ಕೆ ತಲುಪಿದ್ದು, 751 ಸೋಂಕಿತರು ಐಸಿಯುನಲ್ಲಿದ್ದಾರೆ.
ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 5,950ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 94,459ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
113 ಸೋಂಕಿತರು ಬಲಿ: ಬಳ್ಳಾರಿ 5, ಬೆಳಗಾವಿ 1, ಬೆಂಗಳೂರು ನಗರ 32, ಬೀದರ್, ಚಾಮರಾಜನಗರ ಜಿಲ್ಲೆಯಲ್ಲಿ ತಲಾ 1, ಚಿಕ್ಕಬಳ್ಳಾಪುರ 4, ಚಿತ್ರದುರ್ಗ 3, ದಕ್ಷಿಣ ಕನ್ನಡ 6, ದಾವಣಗೆರೆ 1, ಧಾರವಾಡ 10, ಗದಗ 3, ಹಾಸನ 4, ಹಾವೇರಿ 2, ಕಲಬುರ್ಗಿ 5, ಕೊಪ್ಪಳ, ಮಂಡ್ಯ ತಲಾ 2, ಮೈಸೂರು 11, ರಾಯಚೂರು 3, ರಾಮನಗರ 1, ಶಿವಮೊಗ್ಗ 7, ತುಮಕೂರು, ಉಡುಪಿ ತಲಾ 3, ವಿಜಯಪುರ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 9,860 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 166, ಬಳ್ಳಾರಿ 433, ಬೆಳಗಾವಿ 470, ಬೆಂಗಳೂರು ಗ್ರಾಮಾಂತರ 146, ಬೆಂಗಳೂರು ನಗರ 3,420, ಬೀದರ್ 62, ಚಾಮರಾಜನಗರ 67, ಚಿಕ್ಕಬಳ್ಳಾಪುರ 100, ಚಿಕ್ಕಮಗಳೂರು 117, ಚಿತ್ರದುರ್ಗ 174, ದಕ್ಷಿಣ ಕನ್ನಡ 414, ದಾವಣಗೆರೆ 321, ಧಾರವಾಡ 327, ಗದಗ 195, ಹಾಸನ 290, ಹಾವೇರಿ 149, ಕಲಬುರ್ಗಿ 194, ಕೊಡಗು 25, ಕೋಲಾರ 83, ಕೊಪ್ಪಳ 282, ಮಂಡ್ಯ 245, ಮೈಸೂರು 667, ರಾಯಚೂರು 232, ರಾಮನಗರ 59, ಶಿವಮೊಗ್ಗ 342, ತುಮಕೂರು 357, ಉಡುಪಿ 169, ಉತ್ತರ ಕನ್ನಡ 126, ವಿಜಯಪುರ 122, ಯಾದಗಿರಿ ಜಿಲ್ಲೆಯಲ್ಲಿ 106 ಪ್ರಕರಣಗಳು ಪತ್ತೆಯಾಗಿವೆ.







