ಪ್ರಧಾನಿಗೆ ಅವಮಾನ ಆರೋಪ: ವ್ಯಕ್ತಿ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
ಗುರುಪುರ,ಆ.2: ಪ್ರಧಾನಿ ನರೇಂದ್ರ ಮೋದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಗೈದ ಕುಪ್ಪೆಪದವು ಮಂಗ್ಲಿಚ್ಚಾರ್ ಸೈಟ್ ನಿವಾಸಿ ರಂಜಿತ್ ವಿರುದ್ಧ ಬಜ್ಪೆಠಾಣೆಯಲ್ಲಿ ದೂರು ನೀಡಿದ ಬಿಜೆಪಿ ಮುಖಂಡರ ನಿಯೋಗ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.
ಇತ್ತೀಚೆಗೆ ಪ್ರಸಾರಗೊಂಡ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಮೋದಿಯವರು ಮುಧೋಳ ನಾಯಿಗಳ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ರಂಜಿತ್ ಟೀವಿ ಚಾನೆಲೊಂದರ ಫೇಸ್ಬುಕ್ನಲ್ಲಿ ಅವಮಾನಕಾರಿಯಾಗಿ ಕಮೆಂಟ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಜ್ಪೆಠಾಣೆಗೆ ಮನವಿ ನೀಡಿದ ನಿಯೋಗದಲ್ಲಿ ಬಿಜೆಪಿ ಮುಖಂಡರಾದ ಪ್ರಸಾದ್ ಎಂ, ಅನಿಲ್ ಪೆರಾರ, ಗಣೇಶ್ ಪಾಕಜೆ, ಅಮಿತಾ ಶೆಟ್ಟಿ, ಆನಂದ ದೇವಾಡಿಗ, ಹರೀಶ್ ಮಿಜಾರ್, ಕಾಶೀನಾಥ ಕಾಮತ್, ಜಯಂತ್, ಅನುರಾಜ್ ಮತ್ತಿತರರಿದ್ದರು.
Next Story