Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕೊಡಗಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆ...

ಕೊಡಗಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆ 1,605ಕ್ಕೆ ಏರಿಕೆ

ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತ ಮಕ್ಕಳು ಪತ್ತೆ

ವಾರ್ತಾಭಾರತಿವಾರ್ತಾಭಾರತಿ3 Sept 2020 6:18 PM IST
share
ಕೊಡಗಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆ 1,605ಕ್ಕೆ ಏರಿಕೆ

ಮಡಿಕೇರಿ, ಸೆ.3: ಕೊಡಗು ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 1605ರಷ್ಟಾಗಿದ್ದು, ಈ ಪೈಕಿ 1226 ಮಂದಿ ಗುಣಮುಖರಾಗಿದ್ದಾರೆ. 358 ಸಕ್ರಿಯ ಪ್ರಕರಣಗಳಿದ್ದು, 21 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 248ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 15 ಹಾಗೂ ಮಧ್ಯಾಹ್ನ 46 ಮಂದಿ ಸೇರಿದಂತೆ 61 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೋವಿಡ್ ಸೋಂಕಿತ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ. ಕೂಡಿಗೆ ಸೈನಿಕ ಶಾಲೆಯ 3 ವರ್ಷದ ಬಾಲಕಿ, ಗೋಣಿಕೊಪ್ಪ ಸೀಗೇತೋಡಿನ 10 ವರ್ಷದ ಬಾಲಕಿ, ಕುಶಾಲನಗರ ಕುಡ್ಲೂರುವಿನ 10 ವರ್ಷದ ಬಾಲಕ ಮತ್ತು 11 ವರ್ಷದ ಬಾಲಕಿ, ಹೆಬ್ಬಾಲೆಯ ಕನಕ ಬಾಕ್‍ನ 17 ವರ್ಷದ ಬಾಲಕಿ, ಸುಂಟಿಕೊಪ್ಪ ಗುಂಡಿಗುಟ್ಟಿ ಪ್ರಾಥಮಿಕ ಶಾಲೆ ಬಳಿಯ 16 ವರ್ಷದ ಬಾಲಕಿ, ಚೆಟ್ಟಳ್ಳಿ ಶ್ರೀಮಂಗಲದ ಚೇರಳ ಮಸೀದಿ ಬಳಿಯ 11 ವರ್ಷದ ಬಾಲಕ, ವೀರಾಜಪೇಟೆ ಪಾಲಿಬೆಟ್ಟದ ಅತ್ತೂರು ನಲ್ಲಕೋಟೆ ಎಸ್ಟೇಟ್‍ನ 10 ವರ್ಷದ ಬಾಲಕಿಯಲ್ಲಿ ಸೋಂಕು ದೃಢವಾಗಿದೆ.

ಗುರುವಾರ ಬೆಳಗ್ಗೆ ಮಡಿಕೇರಿ ಗಾಳೀಬೀಡುವಿನ ಕೆ.ನಿಡುಗಣೆಯ ಕೂಟುಹೊಳೆ ಬಳಿಯ 55 ವರ್ಷದ ಪುರುಷ, ವೀರಾಜಪೇಟೆ ತಿತಿಮತಿಯ ಸರ್ಕಾರಿ ಪ್ರೌಢಶಾಲೆ ಸಮೀಪದ 40 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮೇಕೇರಿ ಗೌರಿಶಂಕರ ದೇವಾಲಯ ಬಳಿಯ 29 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿ ಗೃಹದ 32 ವರ್ಷದ ಇಬ್ಬರು ಪುರುಷರು, ಮಡಿಕೇರಿ ಹೊಸಬಡಾವಣೆ ಪ್ರಸನ್ನ ಗಣಪತಿ ದೇವಾಲಯ ಬಳಿಯ 40 ವರ್ಷದ ಮಹಿಳೆಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.

ಮಡಿಕೇರಿ ಗೌಳಿಬೀದಿಯ ಪ್ರಸಾದ್ ಕ್ಲಿನಿಕ್ ಸಮೀಪದ 33 ವರ್ಷದ ಮಹಿಳೆ, ವೀರಾಜಪೇಟೆ ಪೊಲೀಸ್ ವಸತಿ ಗೃಹದ 34 ವರ್ಷದ ಪುರುಷ, ಮಡಿಕೇರಿ ಶಾಂತಿ ಚರ್ಚ್ ಎದುರಿನ 41 ವರ್ಷದ ಪುರುಷ, ಮಡಿಕೇರಿ ಬ್ರಾಹ್ಮಣರ ಬೀದಿಯ 39 ವರ್ಷದ ಪುರುಷ, ವೀರಾಜಪೇಟೆ ಬಾಳೆ ಕೋಣನಕಟ್ಟೆಯ 49 ವರ್ಷದ ಮಹಿಳೆ, ಕೂಡುಮಂಗಳೂರಿನ ಡೈರಿ ಬಳಿಯ 50 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಮಧ್ಯಾಹ್ನ ಎಮ್ಮೆಮಾಡು ಮಸೀದಿ ಬಳಿಯ 61 ವರ್ಷದ ಮಹಿಳೆ, ನಾಪೋಕ್ಲು ಕಕ್ಕುಂದಕಾಡು ವೆಂಕಟೇಶ್ವರ ದೇವಾಲಯ ಬಳಿಯ 55 ವರ್ಷದ ಪುರುಷ, ಕುಶಾಲನಗರ ಕಾವೇರಿ ಬಡಾವಣೆಯ 55 ವರ್ಷದ ಪುರುಷ, ಕುಶಾಲನಗರ ಮಾರ್ಕೆಟ್ ರಸ್ತೆಯ 3ನೇ ಬ್ಲಾಕ್‍ನ 35 ವರ್ಷದ ಮಹಿಳೆ, ಕುಶಾಲನಗರ ದಂಡಿಪೇಟೆ ಮಸೀದಿ ಬಳಿಯ 53 ಮತ್ತು 35 ವರ್ಷದ ಪುರುಷರು, ಕುಶಾಲನಗರ ಹೌಸಿಂಗ್ ಬೋರ್ಡ್ ನ 56 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.

ಚೆಟ್ಟಳ್ಳಿ ಪೊನ್ನತ್‍ಮೊಟ್ಟೆಯ  64 ವರ್ಷದ ಪುರುಷ, ಕುಶಾಲನಗರ ಹೆಬ್ಬಾಲೆಯ ಹುಲುಸೆ ಮುಖ್ಯ ರಸ್ತೆಯ 52 ವರ್ಷದ ಪುರುಷ, ಸೋಮವಾರಪೇಟೆಯ ಕ್ಲಬ್ ರಸ್ತೆಯ ಕೊಡವ ಸಮಾಜ ಬಳಿಯ 50 ವರ್ಷದ ಪುರುಷ, ಹೆಬ್ಬಾಲೆಯ 38 ಮತ್ತು 70 ವರ್ಷದ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.

ಕುಶಾಲನಗರ ಮಾದಾಪಟ್ಟಣ ಬಳಿಯ 60 ವರ್ಷದ ಮಹಿಳೆ ಮತ್ತು 57 ವರ್ಷದ ಪುರುಷ, ಆಲೂರು ಸಿದ್ದಾಪುರ ಭುವಂಗಾಲ ಗ್ರಾಮದ 66 ವರ್ಷದ ಪುರುಷ, ಕುಶಾಲನಗರ ಬೈಚನಹಳ್ಳಿಯ ಮಾರಿಯಮ್ಮ ದೇವಾಲಯ ಬಳಿಯ 26 ವರ್ಷದ ಮಹಿಳೆ, ಕುಶಾಲನಗರ ಸೈನಿಕ ಶಾಲೆ ವಸತಿ ಗೃಹದ 23 ವರ್ಷದ ಮಹಿಳೆ, ಸೈನಿಕ ಶಾಲೆ ವಸತಿಗೃಹದ 38 ಹಾಗೂ 36 ವರ್ಷದ ಪುರುಷರಲ್ಲಿ ಸೋಂಕು ಗೋಚರಿಸಿದೆ.

ವೀರಾಜಪೇಟೆ ಗೋಣಿಕೊಪ್ಪದ ಸೀಗೆತೋಡುವಿನ ಆರ್.ಎಂ.ಸಿ ಬಳಿಯ 37 ವರ್ಷದ ಮಹಿಳೆ, ವೀರಾಜಪೇಟೆ ಗೋಣಿಕೊಪ್ಪ ಅರವತ್ತೊಕ್ಲುವಿನ ಮೈಸೂರಮ್ಮ ಕಾಲೋನಿಯ 29 ವರ್ಷದ ಪುರುಷ, ವೀರಾಜಪೇಟೆ ಹೆಗ್ಗಳ ಬೂದಿಮಾಳದ 49 ವರ್ಷದ ಪುರುಷ, ಬೇಟೋಳಿ ರಾಮನಗರದ 62 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ವೀರಾಜಪೇಟೆ ಮೀನುಪೇಟೆಯ ಮಲಬಾರ್ ರಸ್ತೆಯ 46 ವರ್ಷದ ಮಹಿಳೆ, ಮಡಿಕೇರಿ ಕಡಂಗದ ಅರಪಟ್ಟು ಗ್ರಾಮದ 72 ವರ್ಷದ ಮಹಿಳೆ, ವೀರಾಜಪೇಟೆ ಎಫ್.ಎಂ.ಸಿ ರಸ್ತೆಯ ಸರಸ್ವತಿ ಸ್ಟೋರ್ಸ್ ಹಿಂಭಾಗದ 53 ಮತ್ತು 36 ವರ್ಷದ ಪುರುಷ, ಮಡಿಕೇರಿ ಬೊಯಿಕೇರಿಯ ಬಿ.ಎಸ್.ಎನ್.ಎಲ್ ಟವರ್ ಬಳಿಯ 25, 52, 21, 60 ವರ್ಷದ ಪುರುಷರು ಮತ್ತು 56 ವರ್ಷದ ಮಹಿಳೆ, ಮಡಿಕೇರಿ ದಾಸವಾಳ ರಸ್ತೆಯ 49 ವರ್ಷದ ಪುರುಷ, ಮಡಿಕೇರಿ ಪ್ರಕೃತಿ ಲೇಔಟ್‍ನ 28 ವರ್ಷದ ಪುರುಷ ಮತ್ತು 57 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ಗೋಚರಿಸಿದೆ.

ಕುಟ್ಟ ಪೊಲೀಸ್ ವಸತಿಗೃಹದ 28 ವರ್ಷದ ಪುರುಷ, ಗೋಣಿಕೊಪ್ಪ 2ನೇ ಬ್ಲಾಕ್‍ನ 48 ವರ್ಷದ ಪುರುಷ, ವೀರಾಜಪೇಟೆ ಚರ್ಚ್ ರಸ್ತೆಯ ಕಾನ್ವೆಂಟ್ ಬಳಿಯ 38 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ 45 ವರ್ಷದ ಪುರುಷ, ವೀರಾಜಪೇಟೆ ಸಿದ್ದಾಪುರ ಕೆನರಾ ಬ್ಯಾಂಕ್ ಎದುರಿನ 28 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ 27 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X