ಮಂಗಳೂರು ಉತ್ತರ ಶಾಸಕರಿಂದ ಪ್ರಗತಿ ಪರಿಶೀಲನೆ
ಮಂಗಳೂರು, ಸೆ.4: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಕ್ಕುಪತ್ರ ವಿತರಣೆಯ ಪ್ರಗತಿ ಪರಿಶೀಲನಾ ಸಭೆಯು ಶುಕ್ರವಾರ ಮನಪಾ ಕಟ್ಟಡದಲ್ಲಿರುವ ಶಾಸಕ ಡಾ. ವೈ. ಭರತ್ ಶೆಟ್ಟಿಯ ಕಚೇರಿಯಲ್ಲಿ ಜರುಗಿತು.
ಹಕ್ಕುಪತ್ರ ಕೋರಿ ಬಂದಿರುವ ಅರ್ಜಿಗಳು, ವಿತರಣೆಗೆ ಸಿದ್ಧವಾಗಿರುವ ಹಕ್ಕುಪತ್ರಗಳು ಮತ್ತು ಮುಂದಿನ ದಿನಗಳಲ್ಲಿ ಹಕ್ಕುಪತ್ರ ವಿತರಣೆಗೆ ದಿನ ನಿಗದಿಪಡಿಸುವ ಬಗ್ಗೆ ಶಾಸಕರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಹಕ್ಕುಪತ್ರ ವಿತರಣೆಯ ಕಾರ್ಯದಲ್ಲಿ ಯಾವುದೇ ಲೋಪವಾಗದೆ, ಅರ್ಹ ಫಲಾನುಭವಿಗಳ ಬಹುಕಾಲದ ಕನಸು ನನಸಾಗಲು ಸೂಕ್ತ ರೀತಿಯಲ್ಲಿ ಸ್ಪಂದಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಸದಸ್ಯ ಜನಾರ್ದನ ಗೌಡ, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಪ್ರಸಾದಿನಿ, ಉಪ ತಹಶೀಲ್ದಾರ್ ಶಿವಪ್ರಸಾದ, ಕಂದಾಯ ಇಲಾಖೆಯ ಆಸೀಫ್ ಇಕ್ಬಾಲ್, ನವೀನ್ ಮತ್ತಿತರರು ಉಪಸ್ಥಿತರಿದ್ದರು.
Next Story