ಉಳ್ಳಾಲ : ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ
ಉಳ್ಳಾಲ : ಎಂಎಫ್ ಸಿ ಕ್ಲಬ್ ಹಾಗೂ ಯುಟಿ ಫರೀದ್ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಸರ್ಕಾರದ ಯೋಜನೆಯಾದ ಆಯುಷ್ಮಾನ್ ಆರೋಗ್ಯ ಕಾರ್ಡ್ ನ್ನು ಉಚಿತ ವಾಗಿ ವಿತರಣೆ ಮಾಡುವ ಕಾರ್ಯ ಮುಕಚೇರಿಯ ಟಿಪ್ಪು ಸುಲ್ತಾನ್ ಕಾಲೇಜಿನಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಖಾದರ್ ಉದ್ಘಾಟಿಸಿದರು. ಕಾಂಗ್ರೆಸ್ ಜಿಲ್ಲಾ ಮುಖಂಡ ಯು.ಬಿ.ಸಲೀಂ, ಎಂಎಫ್ ಸಿ ಕ್ಲಬ್ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದರು. ನಗರ ಸಭಾ ಕೌನ್ಸಿಲರ್ ಸಪ್ನಾ ಹರೀಶ್ ಮತ್ತು ಅಶ್ರಫ್ ಉಳ್ಳಾಲ , ಅಬೂಬಕರ್, ಶಬೀರ್, ಅಶ್ರಫ್ ಮುಕಚೇರಿ, ಫಯಾಝ್ ಎಂಎಫ್ ಸಿ ಮೊದಲಾದವರು ಉಪಸ್ಥಿತರಿದ್ದರು.
Next Story