ಮನೆಗಳಿಂದಲೇ ಆನ್ ಲೈನ್ನಲ್ಲಿ ಗುರುವಂದನೆ ಸಲ್ಲಿಸಿದ ವಿದ್ಯಾರ್ಥಿಗಳು !
ಉಡುಪಿ, ಸೆ. 6: ವಿದ್ಯಾಥಿಗಳು ತಮ್ಮ ಮನೆಗಳಿಂದಲೇ ಆನ್ ಲೈನ್ ಮೂಲಕ ಗುರು ವಂದನೆ ಸಲ್ಲಿಸಿ ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಜನ್ಮ ದಿನವನ್ನು ಶನಿವಾರ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಉಡುಪಿ ನಿಟ್ಟೂರಿನ ಸೈಲಸ್ ಮಹೇಶ್ ಪ.ಪೂ.ಕಾಲೇಜು ವಿದ್ಯಾರ್ಥಿಗಳೇ ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ
ಪ್ರಿನ್ಸಿಪಾಲ್ ಡಾ. ಅನ್ನಪೂರ್ಣ ರಾವ್ ಮಾತನಾಡಿ ಕೋವಿಡ್ 19 ಸಂಕಷ್ಟದ ಸಂದರ್ಭ ವಿದ್ಯಾರ್ಥಿಗಳು ಶಿಕ್ಷಕರನ್ನು ಮರೆಯದೆ ತಂತ್ರಜ್ಞಾನ ಬಳಸಿ ಗುರುವಂದನೆ ಸಲ್ಲಿಸಿದ್ದು ಮಾದರಿಯಾಗಿದೆ. ವಿದ್ಯಾರ್ಥಿಗಳ ಬುದ್ಧಿಮತ್ತೆ , ಕೌಶಲ್ಯವನ್ನು ಬಿಂಬಿಸಿದೆ ಎಂದು ಶ್ಲಾಘಿಸಿದರು.
ಮಹೇಶ್ ಕಾಲೇಜು ಆಡಳಿತ ಮಂಡಳಿ ವತಿಯಿಂದ ಉಪನ್ಯಾಸಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಪ್ರಾರ್ಥನಾ ಮತ್ತು ನಿಧಿ ಪ್ರಾರ್ಥಿಸಿದರು. ರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು .ಸಾಗರ್ ಮತ್ತು ಸಿಂಚನಾ ಸ್ವಾಗತಿಸಿದರು. ಸಫಾ ವಂದಿಸಿದರು. ಸಂಪ್ರೀತಿ, ರಾಶಿ, ಸಾಗರ್, ರಕ್ಷಿತ್, ನಿಧಿ, ಪ್ರಾರ್ಥನಾ, ಶಿಶಿರ್, ಸಿಂಚನಾ ಆನ್ ಲೈನ್ ಮೂಲಕ ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆ ಆಯೋಜಿಸಿದರು.