ಉಡುಪಿ ಜಿಲ್ಲಾ ಹಾಲುಮತ ಮಹಾಸಭಾದ ಕಚೇರಿ ಉದ್ಘಾಟನೆ
ಉಡುಪಿ, ಸೆ.7: ಉಡುಪಿ ಜಿಲ್ಲಾ ಹಾಲುಮತ(ಕುರುಬಸಮಾಜ) ಮಹಾ ಸಭಾ ಇದರ ಜಿಲ್ಲಾ ಕಚೇರಿಯ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭವು ಸೋಮವಾರ ಜರಗಿತು.
ಮಹಾಸಭಾದ ರಾಜ್ಯ ಸಂಚಾಲಕ ಹನುಮಂತ ಎ.ಗೋಡಿ ಕಚೇರಿಯನ್ನು ಉದ್ಘಾಟಿಸಿದರು. ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ಅಶೋಕ್ ಶೇರಿಗಾರ್ ಅಲೆವೂರ್ ಮತ್ತು ಆಶಾ ಕಾರ್ಯಕರ್ತೆ ರಾಜೀವಿ ನಾಯಕ್, ವಿದ್ಯಾರ್ಥಿಗಳಾದ ಶಿವಲೀಲಾ ಬಿ.ಪೂಜಾರಿ, ಅಂಬಿಕಾ ಆರ್.ಆಡಗಲ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಉಡುಪಿ ಶಾಸಕ ಕೆ.ರಘುಪತಿ ಭಟ್, ಉಡುಪಿ ಹಾಲುಮತ ಮಹಾಸಭಾದ ಅಧ್ಯಕ್ಷ ಸಿದ್ದಪ್ಪ ಏ.ಐಹೊಳೆ, ಉಪಾಧ್ಯಕ್ಷರು ರಾಮಣ್ಣ ಓ.ಆಡಗಲ್ಲ, ಪ್ರಧಾನ ಕಾರ್ಯ ದರ್ಶಿ ಈರಪ್ಪಉಗಲವಾಟ, ಕೋಶಾಧಿಕಾರಿ ಶಿವನಗೌಡ ಪಾಟೀಲ, ಕಾರ್ಯಾಧ್ಯಕ್ಷ ಕುಮಾರ ಚಿಮ್ಮನಕಟ್ಟಿ, ವಿಠ್ಠಲ, ಹನುಮಂತ, ಪ್ರಕಾಶ ಪರಸಪ್ಪ, ಚೌಡಪ್ಪಬರಮಪ್ಪ, ಸಂಗನಗೌಡ, ಮಂಜುನಾಥ, ನಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು. ಅಶೋಕ್ ಶೇರಿಗಾರ್ ಅಲೆವೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story