ಶಿವಮೊಗ್ಗ: ಎರಡು ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ; ಎಂಟು ಮಂದಿ ಬಂಧನ
ಶಿವಮೊಗ್ಗ: ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದು, ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ.
ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ಗಾಂಜಾ ಸಾಗಿಸಲಾಗುತ್ತಿತ್ತು ಎಂಬ ಖಚಿತ ಮಾಹಿತ ಮೇರೆಗೆ ಬಿ.ಹೆಚ್.ರಸ್ತೆಯಲ್ಲಿ ದಾಳಿ ನಡೆಸಿದ ಭದ್ರಾವತಿ ಪೊಲೀಸರು, ಆರು ಕೆ.ಜಿ 400 ಗ್ರಾಂ ಗಾಂಜಾ ವಶಕ್ಕೆ ಪಡೆಡಿದ್ದಾರೆ.
ಎಂಟು ಮಂದಿ ಬಂಧನ
ಗಾಂಜಾ ಸಾಗಿಸುತ್ತಿದ್ದ ಪ್ರಕರಣ ಸಂಬಂಧ ಭದ್ರಾವತಿ ಪೊಲೀಸರು ಹೊಸಸಿದ್ದಾಪುರದ ವಿಜಯ್ ಕುಮಾರ್ (19), ಸಂಕ್ಲಿಪುರದ ಕಿರಣ್ (22), ಹೊಸಸಿದ್ದಾಪುರದ ಚಂದನ್ (18), ಜಟ್ ಪಟ್ ನಗರ ಕಿರಣ್ (28), ಹಳೆನಗರದ ಮಂಜುನಾಥ್ (27), ಸಿದ್ದಾಫುರ ತಾಂಡಾದ ಪವನ್ ನಾಯಕ್ (18), ಹೊಸಸಿದ್ದಾಪುರದ ಲಿಖಿತ್ ಕುಮಾರ್ (21), ಸಂಕ್ಲಿಪುರದ ಚಲುವ ಕುಮಾರ್ (23) ಎಂಬುವವರನ್ನು ಬಂಧಿಸಿದ್ದಾರೆ. ಇವರಿಂದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಭದ್ರಾವತಿ ಡಿವೈಎಸ್ಪಿ ಸುಧಾಕರ್ ನಾಯಕ್ ಮಾರ್ಗದರ್ಶನದಲ್ಲಿ, ಭದ್ರಾವತಿ ನಗರ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ, ಹಳೆನಗರ ಠಾಣೆ ಪಿಎಸ್ಐ ಶ್ರೀನಿವಾಸ್ ಮತ್ತು ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.