ಹೆಮ್ಮಾಡಿ ಗ್ರಾಪಂ ಎದುರು ಸಿಪಿಎಂ ಪ್ರತಿಭಟನೆ
ಕುಂದಾಪುರ, ಸೆ.8: ಕೊರೋನಾ ಸಂಕಷ್ಟಕ್ಕೊಳಗಾದ ಜನತೆಯ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಪಿಎಂ ಹೆಮ್ಮಾಡಿ ಕಟ್ಟಡ ಶಾಖೆ ನೇತೃತ್ವದಲ್ಲಿ ಹೆಮ್ಮಾಡಿ ಗ್ರಾಪಂ ಎದುರು ಸೆಮವಾರ ಧರಣಿ ನಡೆಸ ಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕರೋನ ತಡೆಗಟ್ಟಬೇಕಾದರೆ ಕೃಷಿಕೂಲಿಕಾರರು ಮತ್ತು ಕಾರ್ಮಿಕರ ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಮುಂದಿನ ಆರು ತಿಂಗಳ ವರೆಗೆ ಮಾಸಿಕ 7500ರೂ. ನಗದು ವರ್ಗಾಯಿಸಬೇಕು. ಅಲ್ಲದೇ ಸಿಪಿಎಂ ಪಕ್ಷವು ಮಂಡಿಸಿರುವ 15 ಬೇಡಿಕೆಗಳನ್ನು ಜಾರಿಮಾಡಬೇಕು ಎಂದರು.
ಸಿಪಿಎಂ ರಾಜ್ಯ ಮುಖಂಡರಾದ ಕೆ.ಶಂಕರ್ ಮಾತನಾಡಿ, ಕರೋನ ಸಂಕಷ್ಟದ ಕಾಲದಲ್ಲಿ ವಿದ್ಯುತ್ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಭೂಸುಧಾರಣಾ ಕಾಯ್ದ ತಿದ್ದುಪಡಿ, ತೈಲ ಬೆಲೆ ಏರಿಕೆ ಮಾಡಿ ಬಡ ಜನರ ಮೇಲೆ ಗಧಾಪ್ರಾರ ನಡೆಸಿದೆ ಎಂದು ಆರೋಪಿಸಿದರು.
ಬಳಿಕ ಗ್ರಾಪಂನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಬಿಲ್ಲವ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ, ಸ್ಥಳೀಯ ಮುಖಂಡ ರಾದ ಸಂತೋಷ ಹೆಮ್ಮಾಡಿ, ನರಸಿಂಹ ಹೆಮ್ಮಾಡಿ, ರಾಮ ಕುಲಾಲ್, ಸಿಪಿಎಂ ಜಿಲ್ಲಾ ಸಮಿತಿ ಮುಖಂಡರಾದ ರಾಜೀವ ಪಡುಕೋಣೆ, ನಾಗರತ್ನ ನಾಡ ಮೊದಲಾದವರು ಉಪಸ್ಥಿತರಿದ್ದರು.