Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಮುದ್ರ ಮಧ್ಯೆ 36 ಗಂಟೆ ಏಕಾಂಗಿಯಾದ...

ಸಮುದ್ರ ಮಧ್ಯೆ 36 ಗಂಟೆ ಏಕಾಂಗಿಯಾದ ಮೀನುಗಾರ !

► ಪರ್ಸಿನ್ ಬೋಟ್‌ಗೆ ಕಟ್ಟಿದ್ದ ಸಣ್ಣ ದೋಣಿಯಿಂದ ನಾಪತ್ತೆಯಾಗಿದ್ದ ಸುನೀಲ್ ► ಮಂಗಳೂರಿನಿಂದ ಹೊರಟವರು ಮಲ್ಪೆಯಲ್ಲಿ ದಡ ಸೇರಿದರು

ವಾರ್ತಾಭಾರತಿವಾರ್ತಾಭಾರತಿ8 Sept 2020 11:18 PM IST
share
ಸಮುದ್ರ ಮಧ್ಯೆ 36 ಗಂಟೆ ಏಕಾಂಗಿಯಾದ ಮೀನುಗಾರ !

ಉಳ್ಳಾಲ, ಸೆ. 8: ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗೆ ಕಟ್ಟಿದ್ದ ಸಣ್ಣ ದೋಣಿ ಸಮುದ್ರ ಮಧ್ಯೆ ಬೇರ್ಪಟ್ಟ ಪರಿಣಾಮ ಮೀನುಗಾರನೋರ್ವ 36 ಗಂಟೆ ಕಾಲ ಏಕಾಂಗಿಯಾಗಿ ಸಮುದ್ರದಲ್ಲಿ ಬಾಕಿಯಾದ ಘಟನೆ ನಡೆದಿದೆ.

ಉಳ್ಳಾಲ ಹೊಯ್ಗೆ ನಿವಾಸಿ ಸುನೀಲ್ ಅರ್ಥರ್ ಕುವೆಲ್ಲೊ(47) ಈ ರೀತಿ ಸಮುದ್ರ ಮಧ್ಯೆ ಒಂದೂವರೆ ದಿನ ಏಕಾಂಗಿಯಾಗಿ ಕಳೆದು ಇದೀಗ ಸುರಕ್ಷಿತವಾಗಿ ದಡ ಸೇರಿದ ಮೀನುಗಾರ.

ಘಟನೆಯ ವಿವರ: ಸುನೀಲ್ ಅರ್ಥರ್ ಸೇರಿದಂತೆ 29 ಮಂದಿ ಮೀನುಗಾರ ತಂಡವೊಂದು ‘ಫಾಲ್ಕಾನ್’ ಎಂಬ ಪರ್ಸೀನ್ ಬೋಟ್‌ನಲ್ಲಿ ಸೆ.6ರಂದು ಬೆಳಗ್ಗೆ ಮಂಗಳೂರು ಬಂದರ್‌ನಿಂದ ಮೀನುಗಾರಿಕೆಗೆ ಹೊರಟಿತ್ತು. ಈ ಬೋಟ್‌ಗೆ ಕಟ್ಟಿದ್ದ ಡಿಂಗಿ(ಸಣ್ಣ ದೋಣಿ)ಯಲ್ಲಿ ಸುನೀಲ್ ಸಹಿತ ಐವರು ಮೀನುಗಾರರಿದ್ದರು. ರಾತ್ರಿಯ ವೇಳೆ ಸಮುದ್ರ ತಟದಿಂದ 28 ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭ ಆಳಸಮುದ್ರದಲ್ಲಿ ಭಾರೀ ಗಾಳಿ ಬೀಸಲು ಆರಂಭವಾಗಿತ್ತು. ಈ ವೇಳೆ ಫಾಲ್ಕಾನ್ ಪರ್ಸಿನ್ ಬೋಟ್ ತಾಂತ್ರಿಕ ತೊಂದರೆಗೀಡಾಗಿ ಕೆಟ್ಟು ನಿಂತಿತ್ತು. ಬಳಿಕ ಇನ್ನೊಂದು ಮೀನುಗಾರಿಕೆ ಬೋಟ್ ಸಹಾಯದಿಂದ ಫಾಲ್ಕಾನ್‌ನ್ನು ದಡಕ್ಕೆ ಎಳೆಯುವ ಕಾರ್ಯ ನಡೆದಿತ್ತು. ಈ ವೇಳೆ ಡಿಂಗಿಯಲ್ಲಿದ್ದವರ ಪೈಕಿ ನಾಲ್ವರು ಎದ್ದು ಪರ್ಸಿನ್ ಬೋಟ್‌ನ ಇಂಜಿನ್ ಕಡೆ ತೆರಳಿದ್ದರು. ಆದರೆ ಸುನೀಲ್ ಮಾತ್ರ ಡಿಂಗಿಯಲ್ಲಿದ್ದುಕೊಂಡು ಬಲೆ ಬೀಸುತ್ತಿದ್ದರೆನ್ನಲಾಗಿದೆ. ಬೋಟ್ ಮುಂದೆ ಸಾಗುತ್ತಿದ್ದಂತೆ ಅದಕ್ಕೆ ಕಟ್ಟಿದ್ದ ಡಿಂಗಿಯ ಹಗ್ಗ ತುಂಡಾಗಿದೆ. ಈ ಸಂದರ್ಭ ಸುನೀಲ್ ಜೋರಾಗಿ ಕೂಗಿದರೂ ಇಂಜಿನ್‌ನ ಶಬ್ದಕ್ಕೆ ಅವರ ಕೂಗು ಉಳಿದ ಮೀನುಗಾರರಿಗೆ ಕೇಳಿಸಲಿಲ್ಲ. ಅವರು ಸುನೀಲ್ ಕಡೆ ಗಮನಹರಿಸದೇ ಮಾಲಕರಿಗೆ ಬೋಟ್‌ನಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ದೋಷ ಕಂಡು ಬಂದಿರುವ ಬಗ್ಗೆ ಮಾಹಿತಿ ನೀಡುವುದರಲ್ಲೇ ನಿರತರಾಗಿದ್ದರೆನ್ನಲಾಗಿದೆ. ಬಳಿಕ ಬೇರೆ ಬೋಟ್ ತರಿಸಿ ಅದರಲ್ಲಿದ್ದ ಮೀನುಗಾರರೆಲ್ಲ ವಾಪಸ್ ಆಗಿದ್ದರು. ಈ ವೇಳೆ ಡಿಂಗಿ ಜೊತೆ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಅವರಿಗಾಗಿ ಮತ್ತೆ ಹುಡುಕಾಟ ನಡೆಸಿ ಪತ್ತೆ ಯಾಗದ ಕಾರಣ ಬೋಟ್ ಮಾಲಕ ದೇವು ಸೋಮವಾರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಕೂಡಾ ದಾಖಲಿಸಿದ್ದರು.

ಈ ನಡುವೆ ಸುನೀಲ್ ಸಣ್ಣ ದೋಣಿಯಲ್ಲಿ ಸಮುದ್ರ ಮಧ್ಯೆ ಏಕಾಂಗಿಯಾಗಿ ಬಾಕಿಯಾಗಿದ್ದರು. ನೆರವಿಗೆ ಕರೆ ಮಾಡಲು ಅವರಲ್ಲಿ ಮೊಬೈಲ್ ಫೋನ್ ಇರಲಿಲ್ಲ. ಹೀಗೆ ಒಂದೂವರೆ ದಿನ ಕಳೆದ ಬಳಿಕ ಸೋಮವಾರ ಮಧ್ಯಾಹ್ನ ವೇಳೆ ಮಲ್ಪೆಯಿಂದ ಬಂದ ಬೋಟ್‌ವೊಂದನ್ನು ಗಮನಿಸಿದ ಸುನೀಲ್ ಬೈರಾಸ್ ಮೂಲಕ ಸಿಗ್ನಲ್ ನೀಡಿದರು. ಈ ವೇಳೆ ಇವರನ್ನು ನೋಡಿದ ಮಲ್ಪೆಬೋಟಿನವರು ರಕ್ಷಿಸಿದ್ದಾರೆ.

ನಾವು ಒಟ್ಟು 29 ಮಂದಿ ಸೆ.6ರಂದು ಮೀನುಗಾರಿಕೆಗೆ ತೆರಳಿದ್ದೆವು. ಜೋರು ಗಾಳಿ ಮಳೆ ಇದ್ದ ಕಾರಣ ಸೋಮವಾರ ಬೋಟ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂತು. ಈ ವೇಳೆ ನನ್ನ ಜೊತೆ ಡಿಂಗಿಯಲ್ಲಿದ್ದ 4 ಮಂದಿ ಎದ್ದು ಇಂಜಿನ್ ಕಡೆ ತೆರಳಿದರು. ಇಂಜಿನ್ ಸ್ಟಾರ್ಟ್ ಮಾಡುವ ಸಂದರ್ಭ ದೋಣಿಯ ಹಗ್ಗ ತುಂಡಾಗಿದೆ. ಈ ಸಂದರ್ಭ ನಾನು ಉಳಿದ ಮೀನುಗಾರರಿಗೆ ಕರೆದು ಸೂಚನೆ ನೀಡಿದರೂ ಅವರಿಗೆ ಕೇಳಿಸಲಿಲ್ಲ. ಸೋಮವಾರ ನಾನು ಇಲ್ಲದ ಬಗ್ಗೆ ಅವರ ಗಮನಕ್ಕೆ ಬಂದು ಹುಡುಕಾಡಿ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದರು. ರಾತ್ರಿ ವೇಳೆ ಹಡಗು ಕೂಡಾ ಹೋಗಿದೆ. ಆದರೂ ನನಗೆ ತೊಂದರೆ ಆಗಲಿಲ್ಲ. ಆಹಾರ ಇಲ್ಲದ ಕಾರಣ ಮಳೆಯ ನೀರನ್ನೇ ಆಶ್ರಯಿಸಿ ಬದುಕಿದ್ದೇನೆ. ರಕ್ಷಣೆ ಹೊಂದುವುದು ಹೇಗೆ ಎಂದು ದಾರಿ ಹುಡುಕುತ್ತಿದ್ದ ಸಂದರ್ಭ ಮಲ್ಪೆ ಯಿಂದ ಬಂದ ಬೋಟ್‌ನವರಿಗೆ ಬೈರಾಸ್‌ನ ಮೂಲಕ ಸಿಗ್ನಲ್ ಮಾಡಿದೆ. ಅವರು ತಕ್ಷಣ ಬಂದು ನನ್ನನ್ನು ರಕ್ಷಿಸಿದ್ದಾರೆ.
- ಸುನೀಲ್ ಅರ್ಥರ್ ಕುವೆಲ್ಲೊ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X