ಮಾದಕ ವಸ್ತು ಮಾರಾಟ: ನಾಲ್ವರ ಸೆರೆ, 2.1 ಕೆಜಿ ಗಾಂಜಾ ಜಪ್ತಿ
![ಮಾದಕ ವಸ್ತು ಮಾರಾಟ: ನಾಲ್ವರ ಸೆರೆ, 2.1 ಕೆಜಿ ಗಾಂಜಾ ಜಪ್ತಿ ಮಾದಕ ವಸ್ತು ಮಾರಾಟ: ನಾಲ್ವರ ಸೆರೆ, 2.1 ಕೆಜಿ ಗಾಂಜಾ ಜಪ್ತಿ](https://www.varthabharati.in/sites/default/files/images/articles/2020/09/9/258406-1599650232.jpg)
ಬೆಂಗಳೂರು, ಸೆ.9: ಮಾದಕ ವಸ್ತು ಮಾರಾಟ ಆರೋಪ ಸಂಬಂಧ ನಾಲ್ವರನ್ನು ಇಲ್ಲಿನ ಆರ್ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿ, 2.1 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.
ಕುಣಿಗಲ್ ತಾಲೂಕಿನ ನವೀನ್, ಅಜಯ್ ಕುಮಾರ್, ರಾಹುಲ್ ಹಾಗೂ ನವೀನ್ ಎಂಬವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ಸರಹದ್ದಿನ ಯಶವಂತಪುರ ಇಂಡಸ್ಟ್ರಿಯಲ್ ಸಬರ್ಬ್, ಡಿಡಿಯುಟಿಟಿಎಲ್, ಹರಿಣಿ ಕಾರ್ಗೋ ಮೂವರ್ಸ್ ಮುಂಭಾಗದಲ್ಲಿ ಅಪರಿಚಿತ ನಾಲ್ಕು ಜನ ಯುವಕರು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಪಡೆದು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಬೆಂಗಳೂರು ಉಲ್ಲಾಳ ಉಪ ನಗರದ ಕಾರ್ತೀಕ್ ಮತ್ತು ಹಮೀದ್ ಎಂಬವವರು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದು, ಅದನ್ನು ತಂದು ಬಂಧಿತ ಯುವಕರು ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ತನಿಖೆಯಿಂದ ತಿಳಿದು ಬಂದಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.