ಗಾಂಜಾ ಸೇವನೆ: ಇಬ್ಬರು ವಶಕ್ಕೆ
ಬ್ರಹ್ಮಾವರ, ಸೆ.9: ಉಪ್ಪಿನಕೋಟೆ ರಾ.ಹೆ.66ರ ಕ್ರೈಸ್ತ ಶಿಲುಬೆ ಬಳಿ ಸೆ.7ರಂದು ಸಂಜೆ ವೇಳೆ ಗಾಂಜಾ ಸೇವಿಸುತ್ತಿದ್ದ ಕುಮ್ರಗೋಡು ಗ್ರಾಮದ ಗಣಪತಿ ದೇವಸ್ಥಾನದ ಸಮೀಪದ ನಿವಾಸಿ ಪ್ರಣುಷ್(28) ಎಂಬಾತನನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಟ: ಗಾಂಜಾ ಸೇವನೆಗೆ ಸಂಬಂಧಿಸಿ ವಡ್ಡರ್ಸೆ ಯಾಳಹಕ್ಲು ನಿವಾಸಿ ಸುಜಯ್ ಕುಮಾರ್ ಶೆಟ್ಟಿ(21) ಎಂಬಾತನನ್ನು ಕೋಟ ಪೊಲೀಸರು ಸೆ.7 ರಂದು ಗುಂಡ್ಮಿ ಗ್ರಾಮದ ಸಾಸ್ತಾನ ಜಂಕ್ಷನ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story